ಕನ್ನಡ ಭಾಷೆಯ ಅಸ್ಮಿತೆಯನ್ನು ಕಾಪಾಡಲು ಹಾಗೂ ಕನ್ನಡ ನಾಡು-ನುಡಿ-ಪರಂಪರೆಯ ಉಳಿವಿಗೆ ಅಗತ್ಯವಾದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹಾಗೂ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುವುದು.
ವಿಧಾನಸೌಧದಲ್ಲಿ ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ, 2022-23ನೇ ಸಾಲಿನ ಮ��ರ್ಚ ತಿಂಗಳು ಹಾಗೂ 2023-24ನೇ ಸಾಲಿನ ಮೇ ತಿಂಗಳ ಅಂತ್ಯದವರೆಗಿನ ಎಂಪಿಕ್ ಪ್ರಗತಿ ಪರೀಶಿಲನಾ ಸಭೆಯನ್ನು ನಡೆಸಿದೆನು.
#shivarajtangadagi
ಕನ್ನಡ ನಾಡು ನುಡಿಗೆ ಅಪ್ರತಿಮೆ ಸೇವೆ ಸಲ್ಲಿಸಿದ ಧೀಮಂತ ನಾಯಕ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯಂದು ಅವರಿಗೆ ಶತ ಶತ ನಮನಗಳು.
#ದೀಮಂತನಾಯಕ
#ನಾಲ್ವಡಿ_ಕೃಷ್ಣರಾಜ_ಒಡೆಯರ್
#ಜಯಂತ್ಯೋತ್ಸವ
#shivarajtangadagi
ಸೈದ್ದಾಂತಿಕ ಬದ್ದತೆ, ಜನಪರ ಕಾಳಜಿ ಮತ್ತು ದ್ವೇಷವನ್ನು ಪ್ರೀತಿಯಿಂದ ಗೆಲ್ಲಬಹುದೆಂಬ ನಂಬಿಕೆಯೊಂದಿಗೆ ಐತಿಹಾಸಿಕ ಭಾರತ ಜೋಡೋ ಯಾತ್ರೆ ಮುಖಾಂತರ ದೇಶದಲ್ಲಿ ಕೋಮು-ಸೌಹಾರ್ದತೆಗೆ ಮುನ್ನುಡಿ ಬರೆದ ಭವಿಷ್ಯದ ಪ್ರಧಾನಿ ಶ್ರೀಯುತ
@RahulGandhi
ಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಸದಾ ನಿಮ್ಮ ಮಾರ್ಗದರ್ಶನದ ಅಭಿಲಾಷೆಯೊಂದಿಗೆ,
ಕೆಪಿಸಿಸಿ ನೂತನ ಅಧ್ಯಕ್ಷರಾದ
@DKShivakumar
ರವರ ಪ್ರಮಾಣ ವಚನ ಕಾರ್ಯಕ್ರಮದ ಅಂಗವಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ
@eshwar_khandre
ಯವರ ನೇತೃತ್ವದಲ್ಲಿ, ಜಿಲ್ಲಾ ಪಧಾದಿಕಾರಿಗಳ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರೊಂದಿಗೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ ಸಂದರ್ಭ.
ನನ್ನ ಕೋರಿಕೆಯನ್ನು ನೀವೆಲ್ಲಾ ಈಡೇರಿಸುತ್ತೀರಾ ಎಂಬ ಭರವಸೆಯೊಂದಿಗೆ, ನನ್ನ ಮನಸ್ಸಿನ ಭಾವನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
#ಸರಳಜನ್ಮದಿನಾಚರಣೆ
#ಸಾಮಾಜಿಕಸೇವಾಕಾರ್ಯಗಳು
#ಅರ್ಥಪೂರ್ಣಜನ್ಮದಿನಾಚರಣೆ
#shivarajtangadagi
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದನ್ನು ಸಹಿಸದ ಕೇಂದ್ರ ಬಿಜೆಪಿ ಸರ್ಕಾರ ಅನ್ನಭಾಗ್ಯ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ. ಕೇಂದ್ರದ ಈ ಧೋರಣೆ ಖಂಡಿಸಿ ಜೂನ್ 20ರಂದು ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಬನ್ನಿ ಕನ್ನಡಿಗರ ಆಕ್ರೋಶವನ್ನು ದಿಲ್ಲಿಗೆ ತಲುಪಿಸೋಣ.
ಅಖಿಲಾ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಅತ್ಯಧಿಕ ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ
@kharge
ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ ಹಾಗೂ ಬಲಿದಾನದ ಪ್ರತೀಕ ಪವಿತ್ರ ಬಕ್ರೀದ ಹಬ್ಬದ ಹಾರ್ದಿಕ ಶುಭಾಶಯಗಳು.
ಕರುಣಾಮಯಿಯಾದ ಸೃಷ್ಟಿಕರ್ತನು ನಾಡಿನಲ್ಲಿ ಸುಖ-ಶಾಂತಿಯೊಂದಿಗೆ ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸುತ್ತಿರುವ ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ
@siddaramaiah
ನವರಿಗೆ, ಸಚಿವರಿಗೆ, ಸಂಸದರಿಗೆ, ಶಾಸಕರಿಗೆ, ಚುನಾಯಿತ ಜನಪ್ರತಿನಿಧಿಗಳಿಗೆ, ಕನ್ನಡ ಮನಸ್ಸುಗಳಿಗೆ ಹಾಗೂ ನಾಡಿನ ಸಮಸ್ತ ಬಾಂಧವರಿಗೆ ತುಂಬು ಹೃದಯದ ಸುಸ್ವಾಗತ.
#ಕರ್ನಾಟಕರಾಜ್ಯೋತ್ಸವ
ಮೇಕೆದಾಟು ಜಲಾಶಯ ನಿರ್ಮಾಣದಿಂದ ಸಮದ್ರಕ್ಕೆ ಹರಿದು ವ್ಯರ್ಥವಾಗುವ ಕಾವೇರಿ ನೀರನ್ನ ಸಮರ್ಥವಾಗಿ ಬಳಸಿಕೊಳ್ಳಬಹದು. ಅದಕ್ಕಾಗಿಯೇ ಈ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಬನ್ನಿ ಕೈ ಜೋಡಿಸಿ ಈ ಪಾದಯಾತ್ರೆಯಲ್ಲಿ ಭಾಗವಹಿಸಿ
ಗೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿ
#NammaNeeruNammaHakku
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಳಿಕ ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಆಗಮಿಸುತ್ತಿರುವ ಗಟ್ಟಿ ಧ್ವನಿಯ ದಿಟ್ಟ ನಾಯಕ ಸನ್ಮಾನ್ಯ ಶ್ರೀ
@DKShivakumar
ಅವರಿಗೆ ಹೃದಯಪೂರ್ವಕ ಸ್ವಾಗತ.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ಹಾಸನ ಜಿಲ್ಲಾಡಳಿತ ಸಹಯೋಗದೊಂದಿಗೆ ಆದಿ ಚುಂಚನಗಿರಿ ಮಹಾ ಸಂಸ್ಥಾನದ
ನಿರ್ಮಲಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ಹಾಸನದಲ್ಲಿ ಇಂದು ನಡೆದ 514ನೇ ರಾಜ್ಯಮಟ್ಟದ ಕೆಂಪೇಗೌಡ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನರೊಂದಿಗೆ ಪಾಲ್ಗೊಳ್ಳಲಾಯಿತು.
ಸಿಂದಗಿ ಉಪಚುನಾವಣೆ ಪ್ರಯುಕ್ತ, ಬಲಗೂರು ಮತ್ತು ಶಿರಸಗಿ ಗ್ರಾಮದಲ್ಲಿ, ಪಕ್ಷದ ಅಭ್ಯರ್ಥಿಯಾದ ಶ್ರೀ ಅಶೋಕ್ ಮನಗೊಳಿ ಪರವಾಗಿ, ಮತಯಾಚನೆ ನಡೆಸಿದೆನು.
ಬಿ.ಜೆ.ಪಿ. ಸರ್ಕಾರ, ಮತದಾರರ ವಿಶ್ವಾಸವನ್ನು ಕಳೆದುಕೊಂಡಿದ್ದು, ಮತದಾರ ಪ್ರಭುಗಳ ಸ್ಪಂದನೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಅಶೋಕ ಮನಗೊಳಿಯವರ ಗೆಲುವಿನ ದಿಕ್ಸೂಚಿಯಂತೆ ತೋರುತ್ತಿದೆ.
ಕಾರ್ಗಿಲ್ ಯುದ್ಧ ಭೂಮಿಯಲ್ಲಿ ಸಮರ್ಪಣಾ ಮನೋಭಾವ ಹಾಗೂ ಪರಾಕ್ರಮದಿಂದ ಜಾಗತಿಕ ಮಟ್ಟದಲ್ಲಿ ಜಾಗತಿಕ ಶಕ್ತಿಯನ್ನು ತೋರ್ಪಡಿಸಿದ ವೀರ ಯೋಧರಿಗೆ ಗೌರವ ನಮನಗಳು.
ಯುದ್ಧಭೂಮಿಯಲ್ಲಿ ಹುತಾತ್ಮರಾದ ಭಾರತ ಮಾತೆಯ ಹೆಮ್ಮೆಯ ಪುತ್ರರ ತ್ಯಾಗ ಮತ್ತು ಶೌರ್ಯವನ್ನು ದೇಶವು ಸದಾ ಸ್ಮರಿಸುತ್ತದೆ.
#ಕಾರ್ಗಿಲ್_ವಿಜಯ_ದಿವಸ್
#ಜುಲೈ26
ನನ್ನ ಕೋರಿಕೆಯನ್ನು ಪರಿಗಣಿಸಿ, ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ, ಜನ್ಮದಿನಕ್ಕೆ ವಿಶಿಷ್ಟ ಅರ್ಥ ನೀಡಿದ ತಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
#ಕೋರಿಕೆ
#ಜನ್ಮದಿನ
#ಸಾಮಾಜಿಕಸೇವಾಕಾರ್ಯ
#ಸರಳಜನ್ಮದಿನಾಚರಣೆ
#ಅರ್ಥಪೂರ್ಣಜನ್ಮದಿನಾಚರಣೆ
#ಹೃದಯಪೂರ್ವಕಧನ್ಯವಾದಗಳು
#shivarajtangadagi
Happy to see a handbook of Koppal’s success stories over 4 years. Taking this forward, today we have inaugurated projects worth 600 Cr for all round development of the district.
#NavaKarnatakaNirmana
*ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ನಮ್ಮ ನಾಡಿನ ಗತವೈಭವ ಬಿಂಬಿಸುವ ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಸಂಪುಟದ ಸಹೋದ್ಯೋಗಿಗಳೊಂದಿಗೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಲಾಯಿತು.*
ಪಕ್ಷ ಸಂಘಟನೆಯ ನಿಮಿತ್ಯ ಇಂದು ಕೊಪ್ಪಳ ಜಿಲ್ಲೆಗೆ ಆಗಮಿಸುತ್ತಿರುವ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀಮತಿ
@DrPushpaAmarnat
ಅವರಿಗೆ ಹೃತ್ಪೂರ್ವಕ ಸ್ವಾಗತ.
ನಾಡಿನ ಜನಪ್ರಿಯ ನಾಯಕರು, ಅಭಿವೃದ್ಧಿಯ ಹರಿಕಾರರು, ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ
@siddaramaiah
ನವರ ಹುಟ್ಟು ಹಬ್ಬದ ಅಂಗವಾಗಿ, ನನ್ನ ಸುಪುತ್ರದ್ವಯರು ಮನೆಯ ವಾಹನಗಳಿಗೆ ಅವರ ಭಾವಚಿತ್ರಗಳನ್ನು ಹಾಕಿಸಿ, ಶುಭಾಶಯ ಕೋರುವ ಮುಖಾಂತರ ಅಭಿಮಾನ ಮೆರೆದರು.
#ನಾಡದೊರೆ
#ಅಮೃತಮಹೋತ್ಸವ
#SHASHANKTANGADAGI
#KIRANTANGADAGI
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಹಾಗೂ ಸಂಪುಟದ ಹಿರಿಯ ಸಹುದ್ಯೋಗಿಗಳೊಂದಿಗೆ ಪಾಲ್ಗೊಳ್ಳಲಾಯಿತು.
ತಾಯಿಯ ಮಡಿಲಿಗಿಂತ ನೆಮ್ಮದಿಯ ಸ್ವರ್ಗ ಇನ್ನ್ಯಾವುದಿದೆ?
ಅಮ್ಮನಿಗಿಂತ ಮಿಗಿಲಾದ ದೈವ ಮತ್ಯಾವುದಿದೆ?
ಜಗತ್ತಿನ ಎಲ್ಲ ಮಾತೃಸ್ವರೂಪಿಗಳಿಗೆ ವಿಶ್ವ ಅಮ್ಮಂದಿರ ದಿನದ ಹಾರ್ದಿಕ ಶುಭಾಶಯಗಳು.
#Mothersday2024
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಶ್ರೀಯುತ
@MBPatil
ಎಂ. ಬಿ. ಪಾಟೀಲರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಜನ್ಮದಿನದ ಸಂಭ್ರಮದಲ್ಲಿ ಆ ಭಗವಂತನು ಆಯುರಾರೋಗ್ಯ, ಸುಖ, ಶಾಂತಿಯನ್ನು ಕರುಣಿಸಿ ಇನ್ನೂ ಹೆಚ್ಚಿನ ಜನರ ಸೇವೆ ಮಾಡಲು ಶಕ್ತಿಯೊನ್ನದಗಿಸಲಿ ಎಂದು ಪ್ರಾರ್ಥಿಸುತ್ತೇನೆ.
ಜನಪರ ಅಭಿವೃದ್ಧಿ ಆಶಯಗಳ ರೂಪಕ, ಶೋಷಿತ ವರ್ಗಗಳ ಧ್ವನಿ, ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾದ ಗೌರವಾನ್ವಿತ ಶ್ರೀ
@kharge
ಯವರಿಗೆ ಜನ್ಮದಿನದ ಶುಭಾಶಯಗಳು.
ಸಿಂದಗಿ ಉಪಚುನಾವಣೆ ಪ್ರಯುಕ್ತ, ಸಿಂದಗಿ ಹಾಗೂ ಆಲಮೇಲ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ, ಆಲಮೇಲ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಅಶೋಕ್ ಮನಗೊಳಿ ಪರವಾಗಿ ಹಮ್ಮಿಕೊಳ್ಳಲಾಗಿದ್ದ, ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.
'ಪ್ರತಿಜ್ಞಾ' ಕಾರ್ಯಕ್ರಮ ಯಶಸ್ಸು ಆದ ಕಾರಣ, ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ
@DKShivakumar
ರವರು ಹಮ್ಮಿಕೊಂಡಿದ್ದ ವಿಡಿಯೋ ಕಾನ್ಫರೆನ್ಸನಲ್ಲಿ ಭಾಗವಹಿಸಿದೆ. ಇದೇ ವೇಳೆ, ರಾಜ್ಯದಲ್ಲಿ ಕೊರೊನಾ ಸೋಂಕು ಪರಿಸ್ಥಿತಿಯಿಂದಾಗಿ ಸಂಕಷ್ಠದಲ್ಲಿರುವವರ ನೆರವಿಗೆ ಕಾಂಗ್ರೆಸ್ ಕಾರ್ಯಕರ್ತರು ಕೈಗೊಳ್ಳಬಹುದಾದ ಕ್ರಮಗಳು ಕುರಿತು ಚರ್ಚಿಸಿದೆವು.
ನಾಡಿನ ಸಮಸ್ತ ಜನತೆಗೆ ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಹಾರ್ದಿಕ ಶುಭಾಶಯಗಳು.
ನಿಸ್ವಾರ್ಥ ಸೇವೆ, ಅವಿರತ ಶ್ರಮದೊಂದಿಗೆ ಬೆಂಗಳೂರ ನಿರ್ಮಾಣದಲ್ಲಿ ಬಹುಮಖ್ಯ ಕೊಡುಗೆ ನೀಡಿ, ಇತಿಹಾಸದ ಪು���ಗಳಲ್ಲಿ ಚಿರಸ್ಥಾಯಿಯಾದ, ಅಜರಾಮರರಾದ ಶ್ರೀ ಕೆಂಪೆಗೌಡರ ಜನ್ಮದಿನದಂದು ಅವರಿಗೆ ಗೌರವ ಪೂರ್ವಕ ನಮನಗಳು.
ಆತ್ಮೀಯರು ಸುರುಪುರ್ ಕ್ಷೇತ್ರದ ಶಾಸಕರಾದ ದಿ.ರಾಜ ವೆಂಕಟಪ್ಪ ನಾಯಕ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು.
ಇವರ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಇವರ ಕುಟುಂಬಕ್ಕೆ ಈ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. 🙏🏼🙏🏼
ವಿಚಾರಧಾರೆಯ ಜೊತಗೆ ಸರಳ ಜೀವನ ಹಾಗೂ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿದ ಮಾಜಿ ರಾಷ್ಟ್ರಪತಿ, ಹೆಮ್ಮೆಯ ವಿಜ್ಞಾನಿ ದಿವಂಗತ ಡಾ: ಎ.ಪಿ.ಜೆ. ಅಬ್ದುಲ್ ಕಲಾಂ ಜನ್ಮದಿನದಂದು, ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ಇಂದಿರಾ ಗಾಂಧಿಯವರ ಪ್ರತಿರೂಪವೆಂದೆ ಬಿಂಬಿತರಾದ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಗಳು, ಮಹಿಳಾ ಧ್ವನಿ, ಜನರ ಸ್ಪಂದನೆಗೆ ಸದಾ ಸಿದ್ಧರಿರುವ ಹೆಮ್ಮೆಯ ನಾಯಕಿ ಶ್ರೀಮತಿ
@priyankagandhi
ರವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು.
#HappyBirthdayMadam
#JuniorIndhiraGandhi
ಸಹೋದರ ಸಮಾನರು, ಖ್ಯಾತ ಚಲನಚಿತ್ರ ನಟರಾದ ಡಿ ಬಾಸ್ ಖ್ಯಾತಿಯ ಶ್ರೀ
@dasadarshan
ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಜನ್ಮದಿನದ ಈ ಶುಭಸಂದರ್ಭದಲ್ಲಿ ಆ ಭಗವಂತನು ನಿಮಗೆ ಒಳ್ಳೆಯ ಆಯುರಾರೋಗ್ಯ, ಸುಃಖ-ಶಾಂತಿ ಹಾಗೂ ಸಕಲ ಸಂಪತ್ತನ್ನು ಕೊಟ್ಟು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ದೇವಾಲಯಗಳ ತವರು ಎಂದು ಕರೆಯಿಸಿಕೊಳ್ಳುವ ಕೊಪ್ಪಳ ಜಿಲ್ಲೆಯ 'ಕನಕಗಿರಿ ಉತ್ಸವ - 2024'ರಲ್ಲಿ ಮನರಂಜನೆಯ ರಸದೌತಣ ನೀಡಲು ಉತ್ಸವಕ್ಕೆ ಆಗಮಿಸುತ್ತಿರುವ ಪ್ರಖ್ಯಾತ ಕಲಾವಿದರಿಗೆ ಆತ್ಮೀಯ ಸ್ವಾಗತ.
ಬನ್ನಿ ಆಚರಿಸೋಣ ಕನಕಗಿರಿ ಉತ್ಸವವನ್ನು ಜನೋತ್ಸವವನ್ನಾಗಿ.
ಸರ್ವರಿಗೂ ಸುಸ್ವಾಗತ.
ಸಿಂದಗಿ ಉಪಚುನಾವಣೆ ಪ್ರಯುಕ್ತ, ಆಲಮೇಲಾ ಪಟ್ಟಣದಲ್ಲಿ ಭೋವಿ ಸಮಾಜದ ಬಂಧುಗಳ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಅಶೋಕ್ ಮನಗೊಳಿ ಪರವಾಗಿ ಮತಯಾಚನೆ ನಡೆಸಿದೆನು.
ಈ ನೆಲದ ಜೀವಜಲ ಕಾವೇರಿಗಾಗಿ ನಾವು ನಡೆಸುತ್ತಿರುವ ಪಾದಯಾತ್ರೆಗೆ ಭರ್ಜರಿ ಚಾಲನೆ ಸಿಕ್ಕಿದೆ. ನಮ್ಮೊಂದಿಗೆ ಹೆಜ್ಜೆ ಹಾಕುತ್ತಿರುವ ಸಹಸ್ರಾರು ಜನರ ಉತ್ಸಾಹ, ಸಾಮಾಜಿಕ ಕಳಕಳಿ ನಮ್ಮ ನೀರನ್ನು ನಮ್ಮಿಂದ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ.
ಮೇಕೆದಾಟು ಜಾರಿಯಾಗಲಿ,
ಕನ್ನಡಿಗರ ಬದುಕು ಹಸನಾಗಲಿ..
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಗೌರವಾನ್ವಿತ ಶ್ರೀ ಶಿವರಾಜ್ ತಂಗಡಗಿ ಅವರ ನೇತೃತ್ವದಲ್ಲಿ ನಡೆದ, ರಾಜ್ಯದ ಎಲ್ಲಾ ವ್ಯಾಪಾರ ಉದ್ದಿಮೆ ಹಾಗೂ ಶಿಕ್ಷಣ ಸಂಸ್ಥೆಗಳ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಅಳವಡಿಕೆಗೆ ನಿಯಮ ರೂಪಿಸುವ ಸಂಬಂಧ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯ ಪತ್ರಿಕೆ ವರದಿಗಳು..
ಕರ್ನಾಟಕ ರಾಜ್ಯ ಕಂಡ ಧೀಮಂತ ನಾಯಕರು, ವಿವಿಧ ಭಾಗ್ಯಗಳ ಸರದಾರರು, ಅನ್ನ ಭಾಗ್ಯದ ರೂವಾರಿಗಳು, ನೆಚ್ಚಿನ ನಾಯಕರಾದ ಸನ್ಮಾನ್ಯ ಶ್ರೀ
@siddaramaiah
ನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
75ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಪ್ರಜಾಪ್ರಭುತ್ವ ಹಾಗೂ ಐಕ್ಯತೆಯನ್ನು ಎತ್ತಿ ಹಿಡಿಯಲು
#ಕಾಂಗ್ರೆಸ್_ಸದಸ್ಯತ್ವ_ಅಭಿಯಾನ
ಬನ್ನಿ ಕೈಜೋಡಿಸಿ, ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸೋಣ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನಾಯಕ- ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ವಚನ ವಿವೇಕ ಕಿರುಹೊತ್ತಿಗೆಯನ್ನು ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಬಿಡುಗಡೆಗೊಳಿಸಿದೆನು.
ಸಾಹಿತ್ಯದ ಮೂಲಕ ವಿಶ್ವಕ್ಕೆ ವಿಚಾರ ಕ್ರಾಂತಿಯ ಬೆಳಕು ನೀಡಿದ ಜ್ಞಾನಪೀಠ ಪ್ರಶಸ್ತಿ ವಿಜೇತ ರಾಷ್ಟ್ರಕವಿ ಕುವೆಂಪು ರವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು.
#ಜ್ಞಾನಪೀಠಪ್ರಶಸ್ತಿವಿಜೇತ
#ರಾಷ್ಟ್ರಕವಿ
#ಕುವೆಂಪು
#ಜನ್ಮದಿನಾಚರಣೆ
#ಡಿಸೆಂಬರ29
ಶಾಸಕಾಂಗ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರ ನೇತ್ರತ್ವದಲ್ಲಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ, ಡಿಜಿಟಲ್ ಸದಸ್ಯತ್ವ ನೋಂದಣೆ ಅಭಿಯಾನದ ಅಂಗವಾಗಿ "ಝೂಮ್ ಮೀಟಿಂಗ್" ಮುಖಾಂತರ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಭಾಗವಹಿಸಿದೆನು.
ಮನೆ- ಮನ ತಲುಪೋಣ ಎಂಬ ಉದ್ಘೋಷದೊಂದಿಗೆ ಜನಪರ ಆಡಳಿತ ಹಾಗೂ ಕನಕಗಿರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಕಾರಟಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹೊಸಕೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
75ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿನಲ್ಲಿ ಆಗಸ್ಟ್ 15 ರಂದು, ಮಧ್ಯಾಹ್ನ 2 ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದವರೆಗೆ ಹಮ್ಮಿಕೊಂಡಿರುವ
#freedommarch
ನಲ್ಲಿ ನಾನು ಭಾಗವಹಿಸುತ್ತೇನೆ.
ಸ್ವತಂತ್ರ ಭಾರತದ ಇತಿಹಾಸದ ಈ ದೊಡ್ಡ ನಡಿಗೆಯಲ್ಲಿ ನನ್ನೊಂದಿಗೆ ಬನ್ನಿ.
ನವಭಾರತದ ನಿರ್ಮಾತೃ, ಮಾಜಿ ಪ್ರಧಾನಿಗಳು, ವಿಶ್ವ ಕಂಡಂತಹ ಶ್ರೇಷ್ಠ ಆರ್ಥಿಕ ತಜ್ಞರು, ಸಜ್ಜನ ರಾಜಕಾರಣಿಗಳು, ಹಿರಿಯರಾದ ಶ್ರೀಯುತ ಡಾ:ಮನಮೋಹನಸಿಂಗರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ದೇಶಕ್ಕಾಗಿ ನೀವು ನೀಡಿರುವ ಕೊಡುಗೆಗಳನ್ನು ನೆನೆಯುತ್ತಾ, ನಿಮ್ಮ ಮಾರ್ಗದರ್ಶನದ ನಿರೀಕ್ಷೆಯಲ್ಲಿ ಮತ್ತೊಮ್ಮೆ ನಿಮಗೆ ಜನ್ಮದಿನದ ಶುಭಾಶಯಗಳು.
ಕೆಪಿಸಿಸಿ ಅಧ್ಯಕ್ಷರಾದ ಮಾನ್ಯ ಶ್ರೀ
@DKShivakumar
ಅವರು ಕೊರೊನಾ ಸೋಂಕಿಗೆ ತುತ್ತಾಗಿರುವ ಸುದ್ದಿ ತಿಳಿದು ಬೇಸರವಾಯಿತು. ಆದಷ್ಟು ಬೇಗ ಸೋಂಕಿನಿಂದ ಗುಣಮುಖರಾಗಿ ಜನಸೇವೆಗೆ ಮರಳಲಿ ಎಂದು ಹಾರೈಸುತ್ತೇನೆ.
ನಿಸ್ವಾರ್ಥ ಸೇವೆಯ ಮೂಲಕ ಸಮಾಜ ಸುಧಾರಣೆಗೆ ತಮ್ಮದೆ ಆದ ಕೊಡುಗೆ ನೀಡುತ್ತಿರುವ ನಾಡಿನ ಸಮಸ್ತ ಪತ್ರಕರ್ತರಿಗೆ ಬಂಧುಗಳಿಗೆ, ಮಾಧ್ಯಮ ಮಿತ್ರರಿಗೆ ಪತ್ರಿಕಾ ದಿನದ ಶುಭಾಶಯಗಳು.
#ಪತ್ರಿಕಾದಿನ
#01
ಜುಲೈ
#shivarajtangadagi
ಜನರ ಆರೋಗ್ಯದ ಬದುಕಿಗಾಗಿ ಹಗಲಿರುಳು ಶ್ರಮಿಸುವ ವೈದ್ಯರ ಸೇವೆ ಸದಾ ಸ್ಮರಣೀಯ.
ಜನರ ಆರೋಗ್ಯ ಸುಧಾರಣೆಗಾಗಿ ಸೇವೆ ಸಲ್ಲಿಸುತ್ತಿರುವ ನನ್ನ ನೆಚ್ಚಿನ ಸಮಸ್ತ ವೈದ್ಯ ವೃಂದಕ್ಕೆ ರಾಷ್ಟ್ರೀಯ ವೈದ್ಯರ ದಿನದ ಹಾರ್ದಿಕ ಶುಭಾಶಯಗಳು.
#ರಾಷ್ಟ್ರೀಯವೈದ್ಯರದಿನ
#01
ಜುಲೈ
ನನ್ನ ಕ್ಷೇತ್ರದಲ್ಲಿ ಇಂದು ಕೆ.ಕೆ.ಆರ್.ಡಿ.ಬಿ. ಯೋಜನೆಯಡಿ, ಕಾರಟಗಿಯ 05 & 08ನೇ ವಾರ್ಡ್ ನಲ್ಲಿ ಅಂಗವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ, ಟಿ.ಎಸ್.ಪಿ. ಯೋಜನೆಯಡಿ, ಹುಳ್ಕಿಹಾಳ ಕ್ಯಾಂಪ್, ಚಳ್ಳೂರು ಕ್ಯಾಂಪ್, ದುಂಡಗಿ, ನಾಗನಕಲ್ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಸುಮಾರು 3.93 ಕೋಟಿಯ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದೇನು.
ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಾಗಿ ಹೋರಾಡಿ ದೇಶದ ಜನತೆಗೆ ಸಮಾನತೆಯ, ಘನತೆಯ ಬದುಕಿನ ಹಕ್ಕನ್ನು ಕಲ್ಪಿಸಿದ ಮಹಾ ಮಾನವತವಾದಿ, ಬಾಬಾಸಾಹೇಬ ಡಾ:ಬಿ.ಆರ್. ಅಂಬೇಡ್ಕರ್ ಅವರಿಗೆ ಭಾವಪೂರ್ಣ ನಮನಗಳು.
#ಸಂವಿಧಾನಶಿಲ್ಪಿ
#ಅಂಬೇಡ್ಕರ್
#ಪರಿನಿರ್ವಾಣದಿನ
ಜನಪ್ರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ
@siddaramaiah
ನವರಿಗೆ ಕೊರೊನ ಸೋಂಕು ದೃಢಪಟ್ಟಿದ್ದು, ವೈದ್ಯರ ಸಲಹೆಯಂತೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಅವರು ಶೀಘ್ರವಾಗಿ ಗುಣಮುಖರಾಗಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
#GetwellsoonSiddaramaiah
sir
ನಾಡಿನ ಸಮಸ್ತ ಜನತೆಗೆ ಭಕ್ತಿ ಪಂಥದ ಮೂಲಕ ಮಾನವ ಕುಲದ ಏಳ್ಗೆಗೆ ಶ್ರಮಿಸಿದ, ದಾಸಶ್ರೇಷ್ಠ ಶ್ರೋ ಭಕ್ತ ಕನಕದಾಸರ ಜಯಂತ್ಯೋತ್ಸವದ ಹಾರ್ದಿಕ ಶುಭಾಶಯಗಳು.
#ದಾಸಶ್ರೇಷ್ಟ
#ಮಾನವ_ಕುಲದ_ಸಂತ
#ಶ್ರೀ_ಭಕ್ತ_ಕನದಾಸರು
#ಕನಕದಾಸ_ಜಯಂತಿ
ಹಿರೇಕೋಡಿ ಆಶ್ರಮದ ಆಚಾರ್ಯ ಕಾಮ ಕುಮಾರ ನಂದಿ ಮಹಾರಾಜ ಜೈನ ಮಹಾಮುನಿಗಳ ದುರ್ಮರಣ ದಿಗ್ಭ್ರಮೆ ಮೂಡಿಸಿದೆ.
ಜೈನ ಮಹಾಮುನಿಗಳ ಬರ್ಬರ ಹತ್ಯೆ ತೀವ್ರ ಆಘಾತವನ್ನುಂಟು ಮಾಡಿದೆ.
ಇದೊಂದು ಅತ್ಯಂತ ಅಮಾನವೀಯ ಘಟನೆ.
ಘಟನೆಗೆ ಕಾರಣರಾದವರನ್ನು ಶೀಘ್ರದಲ್ಲೇ ಬಂಧಿಸಿ, ಅಪರಾಧಿಗಳನ್ನು ಕಠಿಣ ಶಿಕ್ಷೆಗೊಳಪಡಿಸಲಾಗುವುದು.
ಸಂವಿಧಾನವು ನಮ್ಮ ಪ್ರಜಾಪ್ರಭುತ್ವದ ಅಂತಃಸತ್ವವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು ಸಂವಿಧಾನದಿಂದಾಗಿ ಸಾಧ್ಯವಾಗಿದೆ. ಸಂವಿಧಾನ ದಿನದ ಸಂದರ್ಭದಲ್ಲಿ, ಸಂವಿಧಾನದ ಮೌಲ್ಯಗಳನ್ನು ಸದಾಕಾಲ ಎತ್ತಿ ಹಿಡಿಯುವ ಪಣ ತೊಟ್ಟು ಗೌರವ ಸಮರ್ಪಿಸೋಣ.
ಬೆಲೆಯೇರಿಕೆಯಿಂದ ನೊಂದ ಗೃಹಿಣಿಯರ ಕೈ ಹಿಡಿಯಲಿದೆ "ಅಭಯ ಹಸ್ತ". ಕಾಂಗ್ರೆಸ್ ಪಕ್ಷವು ಗೃಹ ಲಕ್ಷ್ಮಿ ಗ್ಯಾರಂಟಿ ಮೂಲಕ ಪ್ರತಿ ಮನೆಯ ಯಜಮಾನಿಗೆ ಸಿಗಲಿದೆ ಮಾಸಿಕ ₹2000
#KarnatakaWantsCongress
ಕನ್ನಡದ ಖ್ಯಾತ ನಟ, ಹೆಮ್ಮೆಯ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಂದು ವಿಧವಶರಾಗಿದ್ದರೆನ್ನುವ ಸುದ್ದಿ ಅತ್ಯಂತ ದುಃಖದಾಯಕವಾಗಿದ್ದು, ಆ ಭಗವಂತನು ಮೃತರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಅವರ ಕುಟುಂಬಕ್ಕೆ ಹಾಗೂ ಅವರ ಅಸಂಖ್ಯಾತ ಅಭಿಮಾನಿಗಳಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
#ಯುವರತ್ನ_ವಿಧಿವಶ
75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ, ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಆದೇಶದ ಮೇರೆಗೆ, ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಸ್ವಾತಂತ್ರ್ಯ ನಡಿಗೆ' ಯಲ್ಲಿ ಭಾಗವಹಿಸಿ ಮಾತನಾಡಿದೆನು.
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಜನಪರ ಆಡಳಿತ ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಪಕ್ಷದ ಮುಖಂಡರುಗಳೊಂದಿಗೆ ಮನೆ-ಮನ ತಲುಪೋಣ ಎಂಬ ಉದ್ಘೋಷದೊಂದಿಗೆ ಮರಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಗತಿನಗರ, ಮರಳಿ ಹಾಗೂ ಆಚಾರನರಸಾಪುರ ಗ್ರಾಮಗಳಿಗೆ ಭೇಟಿ ನೀಡಿದೆನು.
ಮೇರನಟ ಡಾ:ರಾಜಕುಮಾರರವರು, ಅಭಿಮಾನಿಗಳನ್ನು ಅಭಿಮಾನಿ ದೇವರುಗಳು ಎಂದು ಕರೆದಿದ್ದರು, ಹೊಸಪೇಟೆಯಲ್ಲಿ ನಟ
@dasadarshan
ರವರ ಮೇಲೆ ನಡೆದ ಹಲ್ಲೆ, ಅಭಿಮಾನಿಗಳ ಘನತೆಯನ್ನು ಕುಗ್ಗಿಸುವಂತಹದ್ದಾಗಿದಿಯೇ ಹೊರತು ಹೆಚ್ಚಿಸುವಂತಹದ್ದಂತು ಖಂಡಿತ ಅಲ್ಲ.
ಕಲೆಯನ್ನು ಗೌರವಿಸುವವರು ಖಂಡಿತವಾಗಿಯೂ ಕಲೆಗಾರರನ್ನು ಅಗೌರವಿಸಲಾರರು.
#WestandWithDarshan
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಹೊಸ ಸಂವತ್ಸರಕ್ಕೆ ನಾಂದಿ ಹಾಡುವ ಯುಗಾದಿ ಹಬ್ಬವು ಸರ್ವರ ಬಾಳಿನಲ್ಲಿ ಸುಖ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ನಿಮ್ಮೆಲ್ಲರ ಕನಸುಗಳೆಲ್ಲ ಸಾಕಾರಗೊಳ್ಳಲಿ.
#HappyUgadi
ಅನ್ಬಾಕ್ಸಿಂಗ್ ಬೆಂಗಳೂರು ಹಬ್ಬದ ಭಾಗವಾಗಿ ಡಿಸೆಂಬರ್ 9ರಂದು ನಡೆಯಲಿರುವ "ನಮ್ಮ ಜಾತ್ರೆ" ಕರ್ನಾಟಕದ ಸಂಸ್ಕೃತಿ, ಕಲೆಯನ್ನು ಅನಾವರಣಗೊಳಿಸಲಿದೆ. ನೈಜ ಜಾನಪದ ಸಂಭ್ರಮವನ್ನು ಸವಿಯಲು, ಕರಕುಶಲ ಕಲಾವಿದರಿಂದ ನೇರವಾಗಿ ಖರೀದಿಸಲು, ದೇಸಿ ಕಲೆ, ಸಂಸ್ಕೃತಿಯನ್ನು ಅನುಭವಿಸಲು ಇದೊಂದು ಅಮೂಲ್ಯ ಅವಕಾಶವಾಗಿದ್ದು ಮರೆಯದೇ ಭಾಗವಹಿಸಿ.
ಕರ್ನಾಟಕ ಲಲಿತ ಕಲಾ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ಸುವರ್ಣ ಸಂಭ್ರಮ ಚಿತ್ರಕಲಾ ಶಿಭಿರಕ್ಕೆ ಭೇಟಿ ನೀಡಿ ಶಿಭಿರಾರ್ಥಿಗಳು ರಚಿಸುತ್ತಿದ್ದ ಕಲಾಕೃತಿಗಳನ್ನು ವೀಕ್ಷಿಸಿದೆನು.
ಈ ಸಂದರ್ಭದಲ್ಲಿ ಇಲಾಖೆಯ ನಿರ್ದೇಶಕರಾದ ಡಾ. ಧರಣಿದೇವಿ ಮಾಲಗತ್ತಿ ಹಾಗೂ ಅಕಾಡೆಮಿಯ ರಿಜಿಸ್ಟರ್ ಶ್ರೀಮತಿ ಸೌಭಾಗ್ಯ ಅವರು ಉಪಸ್ಥಿತರಿದ್ದರು.
Under the dynamic Leadership of Sri
@siddaramaiah
Karnataka is ahead of any other state in investment, job creation and ease of doing business. It is Karnataka's model of development. A role model state to other states.
#NavaKarnatakaNirmana
ದಾಸ್ಯದಿಂದ ವಿಮೋಚನೆಗೊಂಡು ಒಕ್ಕೂಟ ವ್ಯವಸ್ಥೆಯಡಿ ಸಾಮಾಜಿಕ ಹಾಗೂ ಘನತೆಯ ಬದುಕಿಗಾಗಿ ನಡೆದ ಹೋರಾಟಕ್ಕೆ ತಮ್ಮನ್ನು ಅರ್ಪಿಸಿಕೊಂಡ ಮಹನೀಯರಿಗೆ ಹೃದಯಪೂರ್ವಕ ನಮನಗಳು.
#ಕಲ್ಯಾಣ_ಕರ್ನಾಟಕ_ದಿನಾಚರಣೆಯ_ಶುಭಾಶಯಗಳು.
ವಿಕಾಸಸೌಧದ ನನ್ನ ಕಛೇರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳೊಂದಿಗೆ, ಇಲಾಖೆಯ ಪ್ರಗತಿಪರಿಶೀಲನಾ ಸಭೆ ನಡೆಸಿದೆನು
ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳಕಿನ ಹಬ್ಬ ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಸರ್ವರಿಗೂ ಲಕ್ಷ್ಮೀಪೂಜೆಯ ಶುಭಹಾರೈಕೆಗಳು.
Warm greetings and best wishes to all on the occasion of Deepavali.
#HappyDeepavali
ಸಿಂದಗಿ ಉಪಚುನಾವಣೆ ಪ್ರಯುಕ್ತ, ಆಲಮೇಲಾ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯ��್ಥಿಯ ಪರವಾಗಿ, ಇಂದು ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದೆನು.
ಬಿ.ಜೆ.ಪಿ. ಸರ್ಕಾರ, ಮತದಾರರ ವಿಶ್ವಾಸವನ್ನು ಕಳೆದುಕೊಂಡಿದ್ದು, ಮತದಾರ ಪ್ರಭುಗಳ ಸ್ಪಂದನೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಅಶೋಕ ಮನಗೊಳಿಯವರ ಗೆಲುವಿನ ದಿಕ್ಸೂಚಿಯಂತೆ ತೋರುತ್ತಿದೆ.
ದಿನಾಂಕ 07/05/2024 ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ರಾಜ್ಯದಲ್ಲಿನ 2ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ.
#ಕೈಜೋಡಿಸಿ_ಜೀವನಬದಲಿಸಿ
ಸಿಂದಗಿ ಉಪಚುನಾವಣೆ ಪ್ರಯುಕ್ತ, ಸಿಂದಗಿ ಹಾಗೂ ಆಲಮೇಲ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ, ಮೋರಟಗಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಅಶೋಕ್ ಮನಗೊಳಿ ಪರವಾಗಿ ಹಮ್ಮಿಕೊಳ್ಳಲಾಗಿದ್ದ, ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.
ವಿಘ್ನನಿವಾರಕನ ಹಬ್ಬದಂದು ಎಲ್ಲಾ ವಿಘ್ನಗಳು ದೂರವಾಗಿ ನಾಡಿನಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲಸಲಿ ಎಂದು ಪ್ರಾರ್ಥಿಸುತ್ತೇನೆ.
ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.
#GaneshChaturthi2022
ಕಾರಟಗಿ ಪುರಸಭೆ ಚುನಾವಣೆ ಪ್ರಯುಕ್ತ, ಇಂದು ಕುಟುಂಬದ ಸದಸ್ಯರ ಜೊತೆಗೂಡಿ, ಕಾರಟಗಿ ಪಟ್ಟಣದ ಮತಗಟ್ಟೆ ಸಂಖ್ಯೆ 13ರ ಕರ್ನಾಟಕ ಪಬ್ಲಿಕ್ ಶಾಲೆ(ಪ್ರೌಢಶಾಲೆ)(ಪಶ್ಚಿಮ ಭಾಗ)ಯಲ್ಲಿ ಮತದಾನ ಮಾಡಿದೆನು.
ದಕ್ಷಿಣ ಗೋವಾಕ್ಕೆ ಇಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಇಲ್ಲಿನ ಕನ್ನಡಿಗರ ಸಮಸ್ಯೆ ಅಲಿಸಿ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗೋವಾದಲ್ಲಿ ಕನ್ನಡ ಭವನವನ್ನು ಶೀಘ್ರವೇ ನಿರ್ಮಾಣ ಮಾಡುವ ಭರವಸೆ ನೀಡಿದೆನು.
ಸನ್ಮಾನ್ಯ ಮುಖ್ಯಮಂತ್ರಿಗಳಾದ
@siddaramaiah
ನವರ ಅಧ್ಯಕ್ಷತೆಯಲ್ಲಿ ಕೃಷ್ಣಾದಲ್ಲಿನ ಗೃಹ ಕಚೇರಿಯಲ್ಲಿ ಇಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಪಾಲ್ಗೊಂಡು ವಿವಿಧ ಅಭಿವೃದ್ಧಿಗಳ ಬಗ್ಗೆ ಸಂಪೂರ್ಣವಾಗಿ ಚರ್ಚಿಸಲಾಯಿತು*
ಈವೇಳೆ ಸರಕಾರದ ವಿವಿಧ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಾಳೆ ದಿ:16-01-2023ರಂದು ಹಮ್ಮಿಕೊಳ್ಳಲಾಗುತ್ತಿರುವ ನಾ ನಾಯಕಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಶ್ರೀಮತಿ ಪ್ರಿಯಾಂಕ ಗಾಂಧಿಯವರಿಗೆ ತುಂಬು ಹೃದಯದ ಸ್ವಾಗತವನ್ನು ಕೋರುತ್ತೇನೆ.
ಸದರಿ ಸಮಾವೇಶದಲ್ಲಿ ತಾವುಗಳೆಲ್ಲ ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.
Discussed with Party Leaders and party workers on Sri Rahul Gandhi ji's
@OfficeOfRG
visit to Kanakagiri Constituency on 11.02.2018.
We are all charged up to make Sri Rahul Gandhi ji 's visit a grand success.