iPrajwalRevanna Profile Banner
Prajwal Revanna Profile
Prajwal Revanna

@iPrajwalRevanna

Followers
19K
Following
2K
Media
659
Statuses
1K

ಕನ್ನಡಿಗ, Member Of Parliament From Hassan, @Janatadal_S

Joined December 2019
Don't wanna be here? Send us removal request.
@iPrajwalRevanna
Prajwal Revanna
3 years
ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟ, ನಿರ್ಮಾಪಕ ಚಾಲೆಂಜಿಂಗ್ ಸ್ಟಾರ್ ಶ್ರೀ ದರ್ಶನ್ ತೂಗುದೀಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ನಿಮಗೆ ಉತ್ತಮ ಆರೋಗ್ಯ, ಆಯುಷ್ಯ ಹಾಗೂ ಯಶಸ್ಸನ್ನು ಕರುಣಿಸುವ ಮುಖಾಂತರ ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ. @dasadarshan. #HappyBirthdayDarshan
Tweet media one
16
843
3K
@iPrajwalRevanna
Prajwal Revanna
3 years
ನಟ @KicchaSudeep "ಹಿಂದಿ ರಾಷ್ಟ್ರ ಭಾಷೆಯಲ್ಲ" ಎಂಬ ಹೇಳಿಕೆಯನ್ನು ತನ್ನಿಷ್ಟಕ್ಕೆ ತಿರುಚಿ ಪ್ರಶ್ನಿಸಿದ ಹಿಂದಿ ನಟ @ajaydevgn ಅವರ ಟ್ವೀಟ್ ಹಿಂದಿಯೇತರ ಭಾಷೆಗಳ ಮೇಲೆ ಹಿಂದಿ ಭಾಷೆ ಹಾಗೂ ಭಾಷಿಗರ ದಬ್ಬಾಳಿಕೆಗೆ ಹಿಡಿದ ಕೈಗನ್ನಡಿಯೆಂದರೆ ತಪ್ಪಾಗಲಾರದು. ಇವರ ಹೇಳಿಕೆ ಒಕ್ಕೂಟದ ಗೃಹ ಸಚಿವರ ಇತ್ತೀಚಿನ ಹೇಳಿಕೆಗೆ ಪುಷ್ಟಿನೀಡುವಂತಿದೆ. 1/3.
22
548
3K
@iPrajwalRevanna
Prajwal Revanna
3 years
ದೇಶದೆಲ್ಲೆಡೆ ಅಪಾರ ಅಭಿಮಾನಿ ಬಳಗ ಹೊಂದಿರುವ ಪ್ರತಿಭಾನ್ವಿತ ನಟ, ಅಭಿನಯ ಚಕ್ರವರ್ತಿ ಶ್ರೀ @KicchaSudeep ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ನಟನೆಯಲ್ಲಿ ಇನ್ನೂ ಹತ್ತು ಹಲವು ಯಶಸ್ವಿ ಚಿತ್ರಗಳು ಮೂಡಿ ಬರಲಿ‌. ದೇವರು ಉತ್ತಮ ಆರೋಗ್ಯ ಆಯುಷ್ಯ ಕೊಟ್ಟು ಆಶೀರ್ವದಿಸಲೆಂದು ಪ್ರಾರ್ಥಿಸುತ್ತೇನೆ. #HappyBirthdayKicchaSudeep
Tweet media one
14
679
2K
@iPrajwalRevanna
Prajwal Revanna
3 years
ಕನ್ನಡದ #ಕಾಂತಾರ ಚಿತ್ರವನ್ನು ವೀಕ್ಷಿಸಿದೆ, @shetty_rishab ಅವರು ಅದ್ಬುತವಾಗಿ ನಟಿಸಿದ್ದಾರೆ, ಕಾಡಿನ ಜನರ ಅಳಿವು ಉಳಿವಿನ ಹೋರಾಟ ಒಂದೆಡೆಯಾದರೆ, ನಾಡಿನ ಬಂಡವಾಳಶಾಹಿಗಳ ಕರಾಳತೆ ಮತ್ತೊಂದೆಡೆ ಇವೆಲ್ಲವನ್ನೂ ನಿರ್ದೇಶಕರು ಅದ್ಭುತವಾಗಿ ಚಿತ್ರಿಸಿದ್ದಾರೆ. 1/4
Tweet media one
8
144
2K
@iPrajwalRevanna
Prajwal Revanna
4 years
ಕನ್ನಡ ಚಿತ್ರರಂಗದ ಧ್ರುವತಾರೆ, ಯುವಕರ ಕಣ್ಮಣಿ ನಮ್ಮೆಲ್ಲರ ಪ್ರೀತಿಯ ಅಪ್ಪು ಇಂದು ನಮ್ಮ ಜೊತೆ ಇಲ್ಲ ಅನ್ನೋದನ್ನ ನಂಬಲಿಕ್ಕೆ ಸಾಧ್ಯವಿಲ್ಲ, ಕೆಲವು ಭಾವನೆಗಳನ್ನು ವ್ಯಕ್ತಪಡಿಸಲೂ ಕೂಡ ಸಾಧ್ಯವಿಲ್ಲ ಇಂತಹದ್ದೇ ಸ್ಥಿತಿಯಲ್ಲಿ ಈಗ ನಾನಿದ್ದೇನೆ. 🙏🙏. #PuneethRajkumar
Tweet media one
7
219
2K
@iPrajwalRevanna
Prajwal Revanna
4 years
ಕನ್ನಡದ ಚಿತ್ರರಂಗದ ಕೀರ್ತಿಯನ್ನು ಭಾರತದಾದ್ಯಂತ ಪಸರಿಸಿದ ಕನ್ನಡದ ಹೆಮ್ಮೆಯ ನಟ ಅಭಿನಯ ಚಕ್ರವರ್ತಿ ಶ್ರೀ ಕಿಚ್ಚ‌ ಸುದೀಪ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಕನ್ನಡ ಮಾತ್ರವಲ್ಲದೇ ಭಾರತದ ಚಿತ್ರರಂಗದಲ್ಲಿ ಈ ದೀಪ ಸದಾ ಪ್ರಕಾಶಿಸುತ್ತಿರಲಿ ಎಂದು ಹಾರೈಸುತ್ತೇನೆ. @KicchaSudeep
Tweet media one
11
570
2K
@iPrajwalRevanna
Prajwal Revanna
5 years
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಾದ ಶ್ರೀ @KicchaSudeep ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ನಾಯಕತ್ವದಲ್ಲಿ ಇನ್ನೂ ಅತ್ಯುತ್ತಮ ಚಿತ್ರಗಳು ಮೂಡಿ ಬರಲಿ. ಭಗವಂತ ನಿಮಗೆ ಆರೋಗ್ಯ ಆಯುಷ್ಯ ಕೊಟ್ಟು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ. All The Best For Your all the Upcoming Projects. #HBDKicchaSudeep
Tweet media one
10
377
2K
@iPrajwalRevanna
Prajwal Revanna
5 years
ಲೋಕಸಭೆಯಲ್ಲಿ ಎಪಿಎಂಸಿ ಕಾಯ್ದೆ ವಿಷಯ ಪ್ರಸ್ತಾಪಿಸಿ ತಿದ್ದುಪಡಿ ಜಾರಿಗೆ ವಿರೋದ ವ್ಯಕ್ತಪಡಿಸಿ ಮಾತನಾಡಿ ಈ ಕೆಳಗಿನ ಕೆಲ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿ ಸ್ಪಷ್ಟನೆ ಕೋರಿದ್ದೇನೆ, ಸರ್ಕಾರ ಈ ರೈತ ವಿರೋಧಿ ಕಾಯ್ದೆ ಜಾರಿಗೆ ತರುವುದನ್ನು ಕೈಬಿಡಬೇಕೆಂದು ಆಗ್ರಹಿಸಿದ್ದೇನೆ. 1/6
72
209
2K
@iPrajwalRevanna
Prajwal Revanna
4 years
ರಾಷ್ಟ್ರ ಪ್ರಶಸ್ತಿ ವಿಜೇತರು ಹಾಗೂ ಕನ್ನಡ ಚಿತ್ರರಂಗದ ನಾಯಕ ನಟರಾದ ಪವರ್ ಸ್ಟಾರ್ @PuneethRajkumar ರವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಗವಂತನು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ, ನಿಮ್ಮಿಂದ ಮತ್ತಷ್ಟು ಸಾಮಾಜಿಕ ಕಳಕಳಿ ಇರುವ ಸಿನಿಮಾಗಳು ಬರಲಿ ಎಂದು ಆಶಿಸುತ್ತೇನೆ. #HappyBirthdayPuneethRajkumar
Tweet media one
16
348
2K
@iPrajwalRevanna
Prajwal Revanna
4 years
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಹಾಸನ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಸನ ಜಿಲ್ಲೆಯ ಮಹಿಳಾ ಸಾಧಕರಿಗೆ ವಿಶೇಷ ಗೌರವ ಸೂಚಿಸಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ ಆತ್ಮೀಯ ಸ್ನೇಹಿತರೂ ಹಾಗೂ ನಾಯಕ ನಟರಾದ ಚಾಲೆಂಜಿಂಗ್ ಸ್ಟಾರ್ @dasadarshan ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು.
Tweet media one
Tweet media two
Tweet media three
Tweet media four
7
283
1K
@iPrajwalRevanna
Prajwal Revanna
5 years
ಹಿಂದಿ ಹೇರಿಕೆಯ ಕೂಗು ಪ್ರಬಲವಾಗುತ್ತಿರುವ ದಿನಗಳಲ್ಲಿ ದ್ವಿಭಾಷಾ ನೀತಿಯು ಜಾರಿಗೆ ಬರಬೇಕು ಎನ್ನುವ ಕನ್ನಡಿಗರ ಧ್ವನಿ ಇನ್ನಷ್ಟು ಗಟ್ಟಿಯಾಗಬೇಕಿದೆ. 130 ಕೋಟಿ ಭಾರತೀಯರೆಲ್ಲರೂ ಹಿಂದಿ ಕಲಿಯಲೇ ಬೇಕು ಎನ್ನುವುದು ಮೂರ್ಖತನದ ಪರಮಾವಧಿ ಅಲ್ಲದೇ ಮತ್ತೇನು. ?? 1/4.#WeWantTwolanguagepolicy.
43
273
1K
@iPrajwalRevanna
Prajwal Revanna
5 years
ದ್ವಿಭಾಷಾ ನೀತಿಯ ಪರವಾದ ನಾಡಿನ ಯುವಕರ ಹೋರಾಟ ಒಂದು ತಾರ್ಕಿಕ ಅಂತ್ಯ ಕಾಣುವವರೆಗೂ ನಾನು ನಿಮ್ಮ ಜೊತೆ ಸದಾ ಇರುತ್ತೇನೆ. ಮುಂದಿನ ದಿನಗಳಲ್ಲಿ ಈ ವಿಷಯದ ಬಗ್ಗೆ ಲೋಕಸಭೆಯ ಒಳಗೂ, ಹಾಗೂ ಲೋಕಸಭೆಯ ಹೊರಗೂ ಹೋರಾಡುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುವುದರೊಂದಿಗೆ ತ್ರಿಭಾಷಾ ನೀತಿಗೆ ಅಂತ್ಯ ಹಾಡಲು ಶ್ರಮಿಸೋಣ. #WeWantTwolanguagepolicy.
51
250
1K
@iPrajwalRevanna
Prajwal Revanna
4 years
ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವನ್ನು 8ನೇ ಪರಿಚ್ಛೇದದಲ್ಲಿ ಸೇರಿಸಲು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. 18 ಲಕ್ಷಕ್ಕೂ ಹೆಚ್ಚು ಭಾಷಿಕರಿರುವ ತುಳುವಿಗೆ ಸಾಂಸ್ಕೃತಿಕ ಹಿನ್ನೆಲೆಯಿದೆ, ತುಳುವಿಗೆ ಅಧಿಕೃತ ಭಾಷಾ ಸ್ಥಾನಮಾನ ನೀಡುವುದರಿಂದ ಆ ಭಾಷೆಯ ಬೆಳವಣಿಗೆಗೆ ಅನುಕೂಲಕರವಾಗಲಿದೆ. #TuluTo8thSchedule.
71
362
1K
@iPrajwalRevanna
Prajwal Revanna
4 years
ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದೆ. We will Miss you Appu sir 🙏😥. #PunithRajkumar
Tweet media one
3
74
1K
@iPrajwalRevanna
Prajwal Revanna
4 years
ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ @siddaramaiah ನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸುದೀರ್ಘ ಸಾರ್ವಜನಿಕ ಸೇವೆಗಾಗಿ ತಾಯಿ ಚಾಮುಂಡೇಶ್ವರಿ ನಿಮಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
7
52
1K
@iPrajwalRevanna
Prajwal Revanna
4 years
ಯುವ ಜನತಾದಳದ ರಾಜ್ಯಾಧ್ಯಕ್ಷರು ಹಾಗೂ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ನನ್ನ ಸಹೋದರ @Nikhil_Kumar_k ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸುದೀರ್ಘ ಸಾರ್ವಜನಿಕ ಸೇವೆಗಾಗಿ ಭಗವಂತ ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
15
71
1K
@iPrajwalRevanna
Prajwal Revanna
3 years
'ಮೈಸೂರು- ಕುಶಾಲನಗರ' ಹಾಗೂ ಹೆಜ್ಜಾಲ- ಚಾಮರಾಜನಗರ' ರೈಲ್ವೇ ಮಾರ್ಗಗಳ ಕಾಮಗಾರಿಗಳು ಸೇರಿದಂತೆ ನಿಧಾನಗತಿಯಲ್ಲಿ ಸಾಗುತ್ತಿರುವ ರಾಜ್ಯದ ಒಟ್ಟು ಒಂಬತ್ತು ರೈಲ್ವೆ ಕಾಮಗರಿಗಳ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದೆ, ರಾಜ್ಯದ ರೈಲ್ವೆ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಮನವಿ ಮಾಡಿದೆ.
44
142
1K
@iPrajwalRevanna
Prajwal Revanna
4 years
ಕೊರೊನ ಲಸಿಕೆಗೆ 35,000 ಕೋಟಿ ಬಜೆಟ್ ನಲ್ಲಿ ಮೀಸಲಿಡಲಾಗಿದೆ ಎಂದು ನರೇಂದ್ರ ಮೋದಿ ಅವರು ಹೇಳಿದ್ದರು. ಆದರೆ ರಾಜ್ಯಕ್ಕೆ ಅಗತ್ಯ ಪ್ರಮಾಣದ ಲಸಿಕೆ ದೊರಕುತ್ತಿಲ್ಲ. ನಮ್ಮ ಪಾಲಿನ GST ಹಣ ಕೂಡ ನೀಡಿಲ್ಲ. ರಾಜ್ಯದಲ್ಲೂ ಇವರದ್ದೇ ಸರ್ಕಾರ ಇದ್ದರೂ ಕೂಡ ಕನ್ನಡಿಗರಿಗೆ ಆಗುತ್ತಿರುವ ಮಲತಾಯಿ ಧೋರಣೆ ಮಾತ್ರ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
51
251
1K
@iPrajwalRevanna
Prajwal Revanna
5 years
ನಮಸ್ಕಾರ ಸ್ನೇಹಿತರೆ, ನಾನು ಇನ್ನು ಮುಂದೆ ನಿಮ್ಮೆಲ್ಲರ ಜೊತೆ ಈ ಟ್ವಿಟ್ಟರ್ ಖಾತೆ @iPrajwalRevanna ಮುಖಾಂತರ ಸಂಪರ್ಕದಲ್ಲಿರುತ್ತೇನೆ. ನೆಲ, ಜಲ, ಭಾಷೆ ಹಾಗೂ ನಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ಮತ್ತು ರಾಜ್ಯದ ಹಾಗು-ಹೋಗುಗಳ ಬಗ್ಗೆ ನನ್ನ ಅಭಿಪ್ರಾಯ, ನಿಲುವುಗಳನ್ನು ಇಲ್ಲಿ ವ್ಯಕ್ತಪಡಿಸಲಿದ್ದೇನೆ. ಧನ್ಯವಾದಗಳು.ನಿಮ್ಮ ಪ್ರಜ್ವಲ್ ರೇವಣ್ಣ.
99
84
1K
@iPrajwalRevanna
Prajwal Revanna
1 year
ನನ್ನಂತ ಕೋಟ್ಯಾಂತರ #RCB ಅಭಿಮಾನಿಗಳ ಕನಸು ಇಂದು ಈಡೇರಿದೆ. @wplt20 ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮಣಿಸಿ ವಿಜೇತರಾದ @RCBTweets ಮಹಿಳಾ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ಸಲ ಕಪ್ ನಮ್ದಾಯ್ತು!. #RoyalChallengersBangalore #RCBvDC #WPL2024 #WPLFinal #Esalacupnamde
Tweet media one
1
54
1K
@iPrajwalRevanna
Prajwal Revanna
4 years
ಮಂಗಳೂರಿನಲ್ಲಿರುವ ಎಂಆರ್‌ಪಿಎಲ್‌ ಸಂಸ್ಥೆ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದೇ, ಸಂಸ್ಥೆಯ 233 ಹುದ್ದೆಗಳಲ್ಲಿ ಶೇಕಡಾ 98ಕ್ಕೂ ಹೆಚ್ಚು ಉದ್ಯೋಗಗಳನ್ನು ಉತ್ತರ ಭಾರತೀಯರಿಗೆ ನೀಡಿ ಕರಾವಳಿಯ ಸ್ಥಳೀಯ ಯುವಕರಿಗೆ ಅನ್ಯಾಯವೆಸಗಿದೆ. ಭೂಮಿ ಕೊಟ್ಟ ರಾಜ್ಯದ ಯುವಕರಿಗೆ ಕೆಲಸ ನೀಡದೆ ಹೊರ ರಾಜ್ಯದವರಿಗೆ ಮಣೆ ಹಾಕಿರುವ ಸಂಸ್ಥೆಯ ಅವಶ್ಯಕತೆ ನಮಗೇನಿದೆ. ?.
35
195
984
@iPrajwalRevanna
Prajwal Revanna
4 years
Karnataka isn’t even allowed to use the oxygen produced by its own units even during a Pandemic. The centre challenging Karnataka in the Supreme Court, has put many COVID affected people’s lives in jeopardy. Time to remind the union Govt, ‘We’re a federal union of states’.
Tweet media one
31
281
958
@iPrajwalRevanna
Prajwal Revanna
4 years
ಕನ್ನಡಿಗನೊಬ್ಬ ದೆಹಲಿಯ ಗದ್ದುಗೆಯ ಮೇಲೆ ಕನ್ನಡಿಗರ ಸ್ವಾಭಿಮಾನದ ಬಾವುಟವನ್ನು ಹಾರಿಸಿದ ದಿನಕ್ಕೆ ೨೫ ವರ್ಷಗಳು ಕಳೆದಿವೆ, ಸಾಮಾನ್ಯ ರೈತನ ಮಗನಾಗಿ ಸಹಕಾರಿ ಸಂಘಗಳ ಚುನಾವಣೆಯಿಂದ ಆರಂಭಿಸಿ ದೇಶದ ಅತ್ಯುನ್ನತ ಹುದ್ದೆಗೆ ಏರಿದ @H_D_Devegowda ರವರ ರಾಜಕೀಯ ಜೀವನ ನಮ್ಮೆಲ್ಲರಿಗೂ ದಾರಿದೀಪ. #hddevegowda
18
117
964
@iPrajwalRevanna
Prajwal Revanna
5 years
.@nsitharaman avare, no amends were made to IBPS clauses even after your assurance in Rajya Sabhe. In 2020's notification, neither domicile clause is included nor there is an option to write exams in Kannada bcos of which thousands of Kannadigas are losing bank jobs! #IBPSMosa
Tweet media one
53
320
775
@iPrajwalRevanna
Prajwal Revanna
5 years
ವಿವಿಧತೆಯಲ್ಲಿ ಏಕತೆ ಭಾರತ ಒಕ್ಕೂಟ ವ್ಯವಸ್ಥೆಯ ಬಹುದೊಡ್ಡ ಶಕ್ತಿ, ಈ ವಿವಿಧತೆಗೆ ಧಕ್ಕೆ ಉಂಟುಮಾಡುವ ವಿಚಾರಗಳು ಎಂದು ವೈಭವೀಕ��ಣ ಆಗುತ್ತವೆಯೋ ಅಂದು ಈ ದೇಶದ ಅಸ್ತಿತ್ವಕ್ಕೆ ಧಕ್ಕೆ ಬಂದಿತು ಎಂದೇ ಅರ್ಥ. ಹಿಂದಿ ಭಾಷೆಯ ವೈಭವೀಕರಣ ಕೂಡ ಈ ದೇಶದ ಏಕತೆಗೆ ಧಕ್ಕೆ ಉಂಟು ಮಾಡುವ ವಿಷಯವಸ್ತು. #StopHindiImposition .#stophindidivas.
13
156
751
@iPrajwalRevanna
Prajwal Revanna
5 years
ಹೊಳೆನರಸೀಪುರದ ಪೇಟೆ ಬೀದಿಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಮನೆ ಮನೆಗೆ ತೆರಳಿ ಉಚಿತವಾಗಿ ಕೊರೋನಾ ಟೆಸ್ಟ್ ಗಳನ್ನು ಮಾಡಲಾಗುತ್ತಿದೆ. ಸಾರ್ವಜನಿಕರು ಕೊರೋನಾ ವಿಷಯದಲ್ಲಿ ಮುಜುಗರಕ್ಕೆ ಒಳಗಾಗದೆ ಸರ್ಕಾರಿ ಸಿಬ್ಬಂದಿಗಳಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದೇನೆ. ಕರೋನಾ ಬಗ್ಗೆ ಭಯಕ್ಕಿಂತ ಅರಿವು ಮುಖ್ಯ. 🙏
25
159
652
@iPrajwalRevanna
Prajwal Revanna
5 years
ಭಾರತದ ಸಂವಿಧಾನದಲ್ಲಿನ ಭಾಷಾ ನೀತಿಗೆ ತಿದ್ದುಪಡಿ ತಂದು ಎಂಟನೇ ಪರಿಚ್ಛೇದದಲ್ಲಿರುವ ಭಾಷೆಗಳಿಗೆ ಹಿಂದಿ ಮತ್ತು ಇಂಗ್ಲೀಷ್'ನಂತೆ ಸಮಾನ ಸ್ಥಾನಮಾನ ನೀಡಬಹುದು ಎಂಬ ಸರ್ವೋಚ್ಚ ನ್ಯಾಯಾಲಯದ ಸಲಹೆಯನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದೆ. ಹಿಂದಿಯೇತರ ಭಾಷೆಗಳನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿರುವುದಕ್ಕೆ ನಿಖರವಾದ ಕಾರಣವಿದೆಯೇ.?
Tweet media one
11
141
609
@iPrajwalRevanna
Prajwal Revanna
4 years
ರೈತರ ಸಾಲ ಮನ್ನಾ, ಬಡವರ ಬಂಧು ಅಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದು, ಗ್ರಾಮ ವಾಸ್ತವ್ಯ ಹಾಗೂ ಜನತಾ ದರ್ಶನದ ಮೂಲಕ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ದ ಜನ ನಾಯಕ ಶ್ರೀ @hd_kumaraswamy ಅವರಿಗೆ ಹುಟ್ಟಹಬ್ಬದ ಶುಭಾಶಯಗಳು. ದೇವರು ಉತ್ತಮ ಆರೋಗ್ಯ ನೀಡಿ ಇನ್ನಷ್ಟು ದೀರ್ಘ ಕಾಲ ನಾಡಿನ ಸೇವೆ ಮಾಡುವ ಅವಕಾಶ ನೀ��ಲಿ ಎಂದು ಆಶಿಸುತ್ತೇನೆ.
15
44
758
@iPrajwalRevanna
Prajwal Revanna
1 year
ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನಾನು ನನ್ನ ವಕೀಲರ ಮೂಲಕ C.I.D ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ. As I am not in Bangalore to attend the enquiry, I have communicated to C.I.D Bangalore through my Advocate. Truth will prevail soon.
Tweet media one
0
139
772
@iPrajwalRevanna
Prajwal Revanna
5 years
ಕೇಂದ್ರ ಸರ್ಕಾರ ಎಲ್ಲಾ ಬಗೆಯ ನೇಮಕಾತಿ ಪರೀಕ್ಷೆಗಳನ್ನು ಹಾಗೂ ಶೈಕ್ಷಣಿಕ ಪ್ರವೇಶ ಪರೀಕ್ಷೆಗಳನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ನಡೆಸುವ ಬಗ್ಗೆ ಆಲೋಚಿಸುತ್ತಿದೆಯೇ?. ಹಾಗೇನಾದರೂ ಸರ್ಕಾರ ಕೇವಲ ಇಂಗ್ಲಿಷ್ ಹಾಗೂ ಹಿಂದಿ ಮಾತ್ರ ಪರೀಕ್ಷಾ ಭಾಷೆಗಳನ್ನಾಗಿ ಪರಿಗಣಿಸಲು ಆಲೋಚಿಸಿದ್ದರೆ ಅದು ಹಿಂದಿಯೇತರ ರಾಜ್ಯಗಳಿಗೆ ಮಾರಕವಾಗಲಿದೆ.
Tweet media one
12
118
581
@iPrajwalRevanna
Prajwal Revanna
4 years
ಒಕ್ಕೂಟ ಸರ್ಕಾರ ದೇಶಾದ್ಯಂತ ಆಚರಿಸುತ್ತಿರುವ ಹಿಂದಿ ದಿವಸವನ್ನು ವಿರೋಧಿಸಿ ಜೆಡಿಎಸ್ ಪಕ್ಷ ರಸ್ತೆ ತಡೆಯನ್ನು ನಡೆಸುವ ಮೂಲಕ ವಿರೋಧ ವ್ಯಕ್ತಪಡಿಸಲಾಯಿತು. #StopHindiImposition.#ಹಿಂದಿಹೇರಿಕೆನಿಲ್ಲಿಸಿ
Tweet media one
Tweet media two
Tweet media three
Tweet media four
10
171
725
@iPrajwalRevanna
Prajwal Revanna
5 years
ಪ್ರಜಾಪ್ರಭುತ್ವದಲ್ಲಿ ಜನರ ಭಾಷೆಯಲ್ಲಿ ಮಾಹಿತಿ ನೀಡುವುದು ಬಹಳ ಅವಶ್ಯಕವಾದುದು. ಜನರ ಭಾಷೆಯನ್ನು ಹೆಚ್ಚು ಹೆಚ್ಚು ಬಳಸಿದಷ್ಟು ಆಡಳಿತದಲ್ಲಿ ಪಾರದರ್ಶಕತೆ ತರಲು ಸಹಾಯಕ. ಭಾರತ ಸರಕಾರ EIA ಸೇರಿದಂತೆ ಎಲ್ಲಾ ಕಾಯಿದೆ/ಕಾನೂನಿನ ಮಾಹಿತಿಯನ್ನು ಕನ್ನಡದಲ್ಲೂ ನೀಡಲಿ.
Tweet media one
24
126
565
@iPrajwalRevanna
Prajwal Revanna
5 years
ಈ ದೇಶದ ಶ್ರೇಷ್ಠ ಆರ್ಥಿಕ ತಜ್ಞರಲ್ಲೊಬ್ಬರು, ಭಾರತದ ಆರ್ಥಿಕತೆಯ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದವರು, ನರೇಗಾ, ಸ್ಪೆಷಲ್ ಎಕನಾಮಿಕ್ ಝೋನ್ ಆಕ್ಟ್ ನಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದ ದೇಶದ ಮಾಜಿ ಪ್ರಧಾನಮಂತ್ರಿಗಳೂ ಆದ ಶ್ರೀ ಡಾ.ಮನಮೋಹನ್ ಸಿಂಗ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. #HappyBirthdayManmohanSingh
Tweet media one
4
31
551
@iPrajwalRevanna
Prajwal Revanna
5 years
ಭೂಸುಧಾರಣಾ, ಎಪಿಎಂಸಿ ಕಾಯ್ದೆ ಹಾಗೂ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ತಿದ್ದುಪಡಿಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಹಮ್ಮಿಕೊಂಡಿರುವ ಬಂದ್'ಗೆ ನನ್ನ ಸಂಪೂರ್ಣ ಬೆಂಬಲವಿದೆ. ಈಗಾಗಲೇ ಈ ಮಸೂದೆಗಳ ವಿರುದ್ಧ ಲೋಕಸಭೆಯಲ್ಲಿ ಧ್ವನಿ ಎತ್ತಿ ರೈತರು ಎದುರಿಸಬಹುದಾದ ಸಂಕಷ್ಟಗಳನ್ನು ವಿವರಿಸಿದ್ದೇನೆ.
8
47
534
@iPrajwalRevanna
Prajwal Revanna
5 years
ರಾಯಚೂರು ಜಿಲ್ಲೆಯ ಜೆಡಿಎಸ್ ಮುಖಂಡರು ಭೇಟಿಯಾಗಿ ಉತ್ತರ ಕರ್ನಾಟಕದಲ್ಲಿ ಪಕ್ಷದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಕೂಡ ಚರ್ಚಿಸಲಾಯಿತು, ನಾನು ಸದ್ಯದಲ್ಲೇ ಆ ಭಾಗದಲ್ಲಿ ಪ್ರವಾಸ ಮಾಡಿ ಸ್ಥಳೀಯ ನಾಯಕರೊಡನೆ ಸೇರಿ ಪಕ್ಷವನ್ನು ಸಂಘಟಿಸಲು ಶ್ರಮಿಸುವುದಾಗಿ ಭರವಸೆ ನೀಡಿದ್ದೇನೆ.
Tweet media one
Tweet media two
Tweet media three
18
38
511
@iPrajwalRevanna
Prajwal Revanna
3 years
ರಾಜ್ಯದ ಸರಿಸುಮಾರು 2.25 ಲಕ್ಷ ಹೆಕ್ಟೇರ್'ಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯ ಕುರಿತಾದ ಮಾಹಿತಿಯನ್ನು ಕೇಂದ್ರ ಜಲಶಕ್ತಿ ಸಚಿವಾಲಯದಿಂದ ಪಡೆದುಕೊಂಡೆ, ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ ತೆಲಂಗಾಣ ರಾಜ್ಯಗಳ ಆಕ್ಷೇಪಗಳ ಬಗ್ಗೆಯೂ ಸದನದ ಗಮನ ಸೆಳೆಯಲಾಯಿತು.
19
110
674
@iPrajwalRevanna
Prajwal Revanna
1 year
ನಾಡು ಕಂಡ ಶ್ರೇಷ್ಠ ವ್ಯಕ್ತಿ, ಕರ್ನಾಟಕ ರತ್ನ ಅಭಿಮಾನಿಗಳ ಪ್ರೀತಿಯ ಅಪ್ಪು ಡಾ.ಪುನೀತ್ ರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಕನ್ನಡಿಗರ ಹೃದಯದಲ್ಲಿ ನೀವು ಸದಾ ಶಾಶ್ವತ. #appuajaramara #PunithRajKumar
Tweet media one
2
88
679
@iPrajwalRevanna
Prajwal Revanna
3 years
ಕರ್ನಾಟಕ ರತ್ನ, ನಮ್ಮೆಲ್ಲರ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ದೈಹಿಕವಾಗಿ ಅಗಲಿ ಒಂದು ವರ್ಷ ಕಳೆದಿದೆ. ಅಪ್ಪು ನಮ್ಮ ಜೊತೆ ಇಲ್ಲ ಅನ್ನೋದನ್ನ ನಂಬಲಿಕ್ಕೂ ಸಾಧ್ಯವಿಲ್ಲ, ಕೆಲವು ಭಾವನೆಗಳನ್ನು ವ್ಯಕ್ತಪಡಿಸಲೂ ಕೂಡ ಸಾಧ್ಯವಿಲ್ಲ ಇಂತಹದ್ದೇ ಸ್ಥಿತಿಯಲ್ಲಿ ನಾನಿದ್ದೇನೆ. #PuneethRajkumarLivesOn
Tweet media one
3
64
644
@iPrajwalRevanna
Prajwal Revanna
4 years
ಮಂಗಳೂರಿನ MRPL ಸಂಸ್ಥೆಯ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರನ್ನು ಕಡೆಗಣಿಸಿರುವುದರ ವಿರುದ್ಧ ಸಂಸ್ಥೆಯ ಬಳಿ ದಕ್ಷಿಣ ಕನ್ನಡ @YouthwingJDS ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಲಾಯಿತು. MRPL ಆಡಳಿತ ಮಂಡಳಿಗೆ ನಮ್ಮ ಅಕ್ಷೇಪಣಾ ಪತ್ರ ಸಲ್ಲಿಸಿ, ನೇಮಕಾತಿ ಹಿಂಪಡೆದು ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಅವಕಾಶ ನೀಡುವಂತೆ ಒತ್ತಾಯ ಮಾಡಲಾಯಿತು.
Tweet media one
Tweet media two
Tweet media three
Tweet media four
36
119
640
@iPrajwalRevanna
Prajwal Revanna
4 years
ನಮ್ಮ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ಹೆಮ್ಮೆಯ ಕನ್ನಡಿಗ ಶ್ರೀ ರಾಹುಲ್ ದ್ರಾವಿಡ್ ಅವರಿಗೆ ಅಭಿನಂದನೆಗಳು. ಭಾರತ ಕ್ರಿಕೆಟ್ ತಂಡವು ನಿಮ್ಮ ಮಾರ್ಗದರ್ಶನದಲ್ಲಿ ಮತ್ತಷ್ಟು ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಆಶಿಸುತ್ತೇನೆ. #RahulDravid #HeadCoach #TeamIndia
Tweet media one
1
54
626
@iPrajwalRevanna
Prajwal Revanna
4 years
ಕನ್ನಡ ಚಿತ್ರರಂಗದ ಅನರ್ಘ್ಯ ರತ್ನ, ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಕನ್ನಡಿಗರ ಆರಾಧ್ಯ ದೈವ, ಕನ್ನಡದ ಸಾಂಸ್ಕೃತಿಕ ರಾಯಭಾರಿ ಎಂದೇ ಚಿರಪರಿಚಿತರಾಗಿರುವ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಶುಭದಿನವಾದ ಇಂದು ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. #rajkumar.#ರಾಜಕುಮಾರ್
Tweet media one
4
110
622
@iPrajwalRevanna
Prajwal Revanna
5 years
ಬೆಂಗಳೂರು ನಗರ ಯುವ ಜನತಾದಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನನ್ನನ್ನು ಭೇಟಿಯಾಗಿ ಪಕ್ಷ ಸಂಘಟನೆ ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆಯ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ನಾನೂ ಕೂಡ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿ, ಬೆಂಗಳೂರು @YouthwingJDS ಜೊತೆ ನಿಂತು ಬೆಂಗಳೂರಿನಲ್ಲಿ ಪಕ್ಷ ಬಲಪಡಿಸಲು ಶ್ರಮಿಸುವುದಾಗಿ ತಿಳಿಸಿದ್ದೇನೆ.
Tweet media one
Tweet media two
Tweet media three
13
23
464
@iPrajwalRevanna
Prajwal Revanna
3 years
ಸಮಸ್ತ ಕನ್ನಡಿಗರ ಮನದಲ್ಲಿ ಸದಾ ಜೀವಂತವಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂದೆಂದಿಗೂ ಅಜರಾಮರ, ಅವರ ಸಾಮಾಜಿಕ ಕಳಕಳಿ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಹಾಗೂ ವಿಶೇಷವಾಗಿ ಸಾಮಾಜಿಕ ಜೀವನದಲ್ಲಿ ಇರುವವರಿಗೆ ಅಪ್ಪು ಮಾದರಿಯಾಗಿದ್ದಾರೆ. #PuneethRajkumarLivesOn
Tweet media one
3
74
626
@iPrajwalRevanna
Prajwal Revanna
5 years
ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಈಗಾಗಲೇ ಕಾರ್ಯ ನಿರ್ವಹಣೆ ಮಾಡುತ್ತಿರುವಾಗ ಹಿಂದಿಯನ್ನು ಕಡ್ಡಾಯವಾಗಿ ಕಲಿಯಬೇಕು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಹಿಂದಿಯ ಬದಲಾಗಿ ನಮ್ಮ ರಾಜ್ಯದ ಭಾಷೆಗಳಾದ ತುಳು, ಕೊಡವ ಭಾಷೆಗಳಿಗೆ ಮಾನ್ಯತೆ ಕೊಟ್ಟು ತೃತೀಯ ಭಾಷೆಗಳನ್ನಾಗಿ ಕಲಿಯೋಣ. 2/4.#WeWantTwolanguagepolicy.
10
123
451
@iPrajwalRevanna
Prajwal Revanna
3 years
ನಮ್ಮ ರಾಜ್ಯದ ಪ್ರತಿನಿಧಿ ಮುಖ್ಯಮಂತ್ರಿಯ ಸಮ್ಮುಖದಲ್ಲೇ ಕನ್ನಡಕ್ಕೆ ಅವಮಾನವಾಗಿದೆ, ನಮ್ಮದೇ ನೆಲದಲ್ಲಿ ಕನ್ನಡಿಗರು ಮಲತಾಯ ಮಕ್ಕಳಾಗಿದ್ದೇವೆ. @BSBommai ಅವರೇ ಕನ್ನಡಿಗರ ಮೇಲೆ ನಿಮ್ಮ ಪಕ್ಷಕ್ಕೆ ಯಾಕಿಷ್ಟು ಕೋಪ? ನಿಮಗೆ ಅಧಿಕಾರ ಕೊಟ್ಟ ತಪ್ಪಿಗೆ ಕನ್ನಡಿಗರ ಅಸ್ತಿತ್ವವನ್ನೇ ನಾಶ ಮಾಡಲು ಪ್ರಯತ್ನಿಸುತ್ತಿದ್ದೀರಲ್ಲಾ ಇದು ನ್ಯಾಯವೇ?.
@CMofKarnataka
CM of Karnataka
3 years
ಕೇಂದ್ರ ಗೃಹ ಸಚಿವ @AmitShah ಅವರೊಂದಿಗೆ ಮುಖ್ಯಮಂತ್ರಿ @BSBommai ಅವರು ಇಂದು ಬೆಂಗಳೂರಿನಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ, ಸಿಐಐ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ "ಸಂಕಲ್ಪದಿಂದ ಸಿದ್ಧಿ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 1/2
Tweet media one
Tweet media two
Tweet media three
Tweet media four
21
163
625
@iPrajwalRevanna
Prajwal Revanna
4 years
ಇಂದು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಅಪರೂಪದ ಕಪ್ಪು ಚಿರತೆಯನ್ನು ದತ್ತು ಪಡೆದಿದ್ದೇನೆ. ಮೃಗಾಲಯದಲ್ಲಿ ವನ್ಯಜೀವಿಗಳನ್ನು ದತ್ತು ಪಡೆಯುವ ಮೂಲಕ ವನ್ಯಜೀವಿಗಳ ಪಾಲನೆಯಲ್ಲಿ ಕೈ ಜೋಡಿಸಿದ್ದೇನೆ. ಸಾಧ್ಯವಾದವರೆಲ್ಲ ಒಂದೊಂದು ಪ್ರಾಣಿಯನ್ನು ದತ್ತು ಪಡೆಯುವ ಮೂಲಕ ಸಂಕಷ್ಟದಲ್ಲಿರುವ ರಾಜ್ಯದ ಮೃಗಾಲಯಗಳಿಗೆ ಎಲ್ಲರೂ ನೆರವಾಗೋಣ.
Tweet media one
Tweet media two
11
58
610
@iPrajwalRevanna
Prajwal Revanna
4 years
ನಾಡು ಕಟ್ಟಿದ ದೊರೆ, ಆಧುನಿಕ ಮೈಸೂರು ರಾಜ್ಯದ ಪಿತಾಮಹ ಎಂದೇ ಪ್ರಖ್ಯಾತರಾದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನ ಇಂದು. ಪ್ರತಿಯೊಬ್ಬ ಕನ್ನಡಿಗನೂ ಶ್ರೀಯುತರನ್ನು ಪ್ರತಿದಿನವೂ ನೆನೆಯಬೇಕು. ವರ್ಣಿಸಲು, ಬಣ್ಣಿಸಲು ಅಸಾಧ್ಯವಾದಷ್ಟು ಕೊಡುಗೆಗಳನ್ನು ಈ ರಾಜ್ಯಕ್ಕೆ ನೀಡಿದ್ದಾರೆ. 1/2
Tweet media one
5
55
607
@iPrajwalRevanna
Prajwal Revanna
5 years
ಸರ್ವೋಚ್ಚ ನ್ಯಾಯಾಲಯದ ಸಲಹೆಯನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ಈ ದೇಶದಲ್ಲಿ ಭಾಷಾ ಸಮಾನತೆ ಸಾಧ್ಯವಿಲ್ಲ ಎಂಬ ಸಂದೇಶ ನೀಡಿ ಹಿಂದಿಯೇತರ ಭಾಷಿಕರಿಗೆ ದ್ರೋಹ ಬಗೆದಿದೆ. ಈ ದೇಶದಲ್ಲಿ ಹಿಂದಿಯೇತರರನ್ನು ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿಯೇ ಉಳಿಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
Tweet media one
7
90
438
@iPrajwalRevanna
Prajwal Revanna
4 years
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಲಾಳನಕೆರೆಯವರಾದ ಹಾಗೂ ಪ್ರಸ್ತುತ ಉತ್ತರ ಪ್ರದೇಶದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆಗಿರುವ ಕನ್ನಡಿಗ ಸುಹಾಸ್ ಯತಿರಾಜ್ ರವರು ಪ್ಯಾರಾಲಿಂಪಿಕ್ಸ್‌ನ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ, ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
Tweet media one
3
47
603
@iPrajwalRevanna
Prajwal Revanna
5 years
ಕೇಂದ್ರ ರಾಜ್ಯ ರೈಲ್ವೇ ಸಚಿವರು ಹಾಗೂ ಬೆಳಗಾವಿಯ ಸಂಸದರಾದ ಸುರೇಶ್ ಅಂಗಡಿ ಅವರ ನಿಧನದ ಸುದ್ದಿ ಮನಸ್ಸಿಗೆ ತೀವ್ರವಾದ ಆಘಾತವನ್ನುಂಟು ಮಾಡಿದೆ. ಶ್ರೀಯುತರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬ ವರ್ಗದವರಿಗೆ, ಸ್ನೇಹಿತರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
1
23
440
@iPrajwalRevanna
Prajwal Revanna
5 years
ರಾಜ್ಯ ಕಂಡ ಶ್ರೇಷ್ಠ ಲೇಖಕರಲ್ಲೊಬ್ಬರಾದ ಪೂರ್ಣಚಂದ್ರ ತೇಜಸ್ವಿಯವರು ಕೇವಲ ಬರಹಕ್ಕೆ ಸೀಮಿತರಾಗದೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡವರು. ವಿಶೇಷವಾಗಿ ನಾಡು, ನುಡಿ, ಪರಿಸರದ ಬಗ್ಗೆ ಅಪಾರ ಕಾಳಜಿಯುಳ್ಳ ವ್ಯಕ್ತಿತ್ವ ಇವರದ್ದು. ಇವರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತವಾಗಿರುತ್ತವೆ. ಪೂಚಂತೇ ಅವರ ಹುಟ್ಟುಹಬ್ಬದ ಸ್ಮರಣೆಗಳು.
Tweet media one
0
21
440
@iPrajwalRevanna
Prajwal Revanna
4 years
ಮಹದಾಯಿ ಯೋಜನೆ ವಿಚಾರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದೇನೆ ಆದರೆ ಒಕ್ಕೂಟ ಸರ್ಕಾರ ನೀಡಿರುವ ಉತ್ತರದ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಕಳಸಾ ಬಂಡೂರಿ ಯೋಜನೆಯನ್ನು ಪ್ರಾರಂಭಿಸಲು ಯಾವುದೇ ವಿಶೇಷ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ ಮತ್ತು ಮಹದಾಯಿ, ಮಲಪ್ರಭಾ ನದಿ ಜೋಡಣೆಯ ವಿಚಾರ ಕೂಡ ಸಧ್ಯಕ್ಕೆ ಸರ್ಕಾರದ ಮುಂದೆ ಇಲ್ಲ ಎಂಬುದು ಸ್ಪಷ್ಟವಾಗಿದೆ.
Tweet media one
19
115
593
@iPrajwalRevanna
Prajwal Revanna
3 years
ಪ್ರಾದೇಶಿಕ ಹಿತಾಸಕ್ತಿಗೆ ಮಾರಕವಾದ ಹಿಂದಿ ಹೇರಿಕೆಯನ್ನು ವಿರೋಧಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ಇದು ಕೇವಲ ಭಾಷೆಯ ವಿಷಯ ಮಾತ್ರ ಅಲ್ಲ ಹಿಂದಿ ಹೇರಿಕೆಯಿಂದ ನಮ್ಮ ಪಾಲಿಗೆ ದೊರಕಬೇಕಾದ ಉದ್ಯೋಗಗಳು ಪರ ರಾಜ್ಯದವರ ಪಾಲಾಗುತ್ತಿವೆ. ನಮ್ಮ ಭಾಷೆಯಲ್ಲಿ ಸಂಪೂರ್ಣವಾಗಿ ಸೇವೆ ನೀಡುವಲ್ಲಿ ಸರ್ಕಾರ ಸೋತಿದೆ. #StopHindiImposition.
12
167
577
@iPrajwalRevanna
Prajwal Revanna
4 years
ಕರ್ನಾಟಕ ಉತ್ಪಾದಿಸುವ ಆಮ್ಲಜನಕದಲ್ಲಿ ತಮಗೆ ಬೇಕಾದಷ್ಟು ಆಮ್ಲಜನಕ ಪಡೆಯದಂತೆ ಕೇಂದ್ರ ಸರ್ಕಾರ ಮಾಡಿದೆ. ಕೇಂದ್ರ ನಮ್ಮ ಅಹವಾಲಿನ ವಿರುದ್ಧ ಸುಪ್ರೀಮ್ ಕೋರ್ಟ್ ಮೊರೆ ಹೋಗಿರುವುದು ಖಂಡನೀಯ. ಇದರಿಂದ ಕರ್ನಾಟಕದಲ್ಲಿ ಕೊರೊನಾಗೆ ತುತ್ತಾಗಿ ಬಳಲುತ್ತಿರುವ ಎಷ್ಟೋ ಜೀವಗಳು ಅಪಾಯದಲ್ಲಿವೆ. ನಮ್ಮ ದೇಶ ರಾಜ್ಯಗಳ ಒಕ್ಕೂಟ ಎಂಬುದನ್ನ ಕೇಂದ್ರ ಮರೆಯಕೂಡದು.
@iPrajwalRevanna
Prajwal Revanna
4 years
Karnataka isn’t even allowed to use the oxygen produced by its own units even during a Pandemic. The centre challenging Karnataka in the Supreme Court, has put many COVID affected people’s lives in jeopardy. Time to remind the union Govt, ‘We’re a federal union of states’.
Tweet media one
7
113
558
@iPrajwalRevanna
Prajwal Revanna
5 years
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಅಮ್ಮಾಜಮ್ಮಾ ಸತ್ಯನಾರಾಯಣ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಕ್ಷೇತ್ರದ ಕಾರ್ಯಕರ್ತರ ಹುಮ್ಮಸ್ಸು ಮತ್ತು ಅಭಿಮಾನವನ್ನು ನೋಡಿ ಅಕ್ಷರಶಃ ಮೂಕ ವಿಸ್ಮಿತನಾದೆ. #Sira
Tweet media one
Tweet media two
Tweet media three
Tweet media four
7
21
402
@iPrajwalRevanna
Prajwal Revanna
3 years
ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗ ಪರೀಕ್ಷೆಗಳನ್ನು ಮತ್ತೊಮ್ಮೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನಡೆಸಲು ತಯಾರಿ ನಡೆಸಿದೆ, ರಾಷ್ಟ್ರೀಯ ಪಕ್ಷಗಳ ಪ್ರಾದೇಶಿಕ ವಿರೋಧಿ ನಿಲುವುಗಳು ಪದೇ ಪದೇ ಸ್ಪಷ್ಟವಾಗುತ್ತಿವೆ, ಕನ್ನಡ ಮಕ್ಕಳ ಅನ್ನ ಕಸಿದು ಹಿಂದಿ ಭಾಷಿಕರ ತಟ್ಟೆಗೆ ಹಾಕುವ ಕೆಲಸವನ್ನು ಕೇಂದ್ರ ಮಾಡುತ್ತಿದೆ. 1/4 #stophindiimpostion
Tweet media one
11
192
585
@iPrajwalRevanna
Prajwal Revanna
3 years
ರಾಷ್ಟ್ರ ಕಂಡ ಧೀಮಂತ ನಾಯಕ, ಹೋರಾಟಗಳಿಂದಲೇ ರೂಪುಗೊಂಡು ಒಕ್ಕೂಟದ ಅತ್ಯುನ್ನತ ಹುದ್ದೆಗೇರಿದ ಏಕೈಕ ಕನ್ನಡಿಗ, ನಾಡು ನುಡಿ ಗಡಿ ಜಲ ವಿಚಾರದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಮಹಾನ್ ಕನ್ನಡಿಗ ಹಾಗೂ ನನ್ನ ಮಾರ್ಗದರ್ಶಕರಾದ ಮಾಜಿ ಪ್ರಧಾನಿ ಶ್ರೀಯುತ @H_D_Devegowda ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 1/2
Tweet media one
12
32
568
@iPrajwalRevanna
Prajwal Revanna
3 years
ಭಾಷಾ ದಬ್ಬಾಳಿಕೆ ಹಿಂದಿಯೇತರ ರಾಜ್ಯಗಳ ಜನರ ಉದ್ಯೋಗ ಹಾಗೂ ವಿದ್ಯಾಭ್ಯಾಸಕ್ಕೂ ಮಾರಕವಾಗಿದೆ, ಹಿಂದಿ ಭಾಷಿಕರು ಇಂದಿಗೂ ಕೂಡ ಎಲ್ಲಾ ಪ್ರವೇಶ ಪರೀಕ್ಷೆಗಳನ್ನೂ ತನ್ನ ತಾಯ್ನುಡಿಯಲ್ಲಿ ಬರೆಯುವ ಅವಕಾಶ ಹೊಂದಿದ್ದಾರೆ, ಆದರೇ ಹಿಂದಿಯೇತರ ಅಭ್ಯರ್ಥಿಗಳಿಗೆ ಅನೇಕ ಪರೀಕ್ಷೆಗಳನ್ನು ತನ್ನ ತಾಯ್ನುಡ���ಯಲ್ಲಿ ಬರೆಯುವ ಅವಕಾಶ ಇನ್ನೂ ಕನಸಾಗಿಯೇ ಉಳಿದಿದೆ 1/5.
4
129
577
@iPrajwalRevanna
Prajwal Revanna
4 years
ಕಿತ್ತೂರನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಿ��ೊಳಿಸಲು ಹೋರಾಡಿದ ವೀರ ಸೇನಾನಿ, ಕಿತ್ತೂರು ಸಂಸ್ಥಾನದ ಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನದಂದು ರಾಯಣ್ಣನ ಪಾದಗಳಿಗೆ ನನ್ನ ಭಕ್ತಿ ಪೂರ್ವಕ ನಮನಗಳು. #SangolliRayanna
Tweet media one
1
31
556
@iPrajwalRevanna
Prajwal Revanna
5 years
ಮಾನ್ಯ @hd_kumaraswamy ರವರು ಮುಖ್ಯಮಂತ್ರಿಯಾಗಿದ್ದಾಗ ಮಾನವೀಯತೆ ದೃಷ್ಟಿಯಿಂದ ಅಂಗವಿಕಲ ಮಹಿಳೆಗೆ ರಾಮದುರ್ಗ ತಹಸೀಲ್ದಾರ್ ಕಚೇರಿಯಲ್ಲಿ ಕೊಡಿಸಿದ್ದ ಕೆಲಸವನ್ನು ಕೂಡ ಈಗಿನ ಸರ್ಕಾರ ಕಿತ್ತುಕೊಂಡಿರೋದು ಅಮಾನವೀಯ. ಮಾನ್ಯ @BSYBJP ಅವರೇ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣವೇ ಕೆಲಸಕ್ಕೆ ಮರುನೇಮಕಾತಿ ಮಾಡಿ ನ್ಯಾಯ ಒದಗಿಸಿ.
Tweet media one
26
107
530
@iPrajwalRevanna
Prajwal Revanna
4 years
ಲೋಕಸಭೆಯ ಅಧಿವೇಶನದಲ್ಲಿ ಇಂದು ಮೇಕೆದಾಟು ಯೋಜನೆಯ ಪರ ಧ್ವನಿ ಎತ್ತುವ ಮೂಲಕ ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು ಅನ್ನೋದನ್ನು ಪ್ರತಿಪಾದಿಸಿದೆ, ಕಾವೇರಿ ನೀರಿನ ವಿಚಾರದಲ್ಲಿ ಅನ್ಯರಾಜ್ಯಗಳಿಗೆ ಅನ್ಯಾಯವಾಗದಂತೆ ನಡೆದುಕೊಳ್ಳುವ ಜವಾಬ್ದಾರಿ ನಿರ್ವಹಿಸುವ ಮೂಲಕ ಮೇಕೆದಾಟು ಯೋಜನೆಯನ್ನು ರಾಜ್ಯ ಪ್ರಾರಂಭಿಸುತ್ತದೆ.
22
66
547
@iPrajwalRevanna
Prajwal Revanna
5 years
ಭಾರತದ ಬಹುತೇಕ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ, ಅವರ ಕುಟುಂಬ ವರ್ಗದವರಿಗೆ, ಸ್ನೇಹಿತರಿಗೆ ಹಾಗೂ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
Tweet media one
2
18
384
@iPrajwalRevanna
Prajwal Revanna
5 years
ಕಿತ್ತೂರನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಳಿಸಲು ಹೋರಾಡಿದ ವೀರ ಸೇನಾನಿ, ಕಿತ್ತೂರು ಸಂಸ್ಥಾನದ ಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನದಂದು ರಾಯಣ್ಣನ ಪಾದಗಳಿಗೆ ನನ್ನ ಪ್ರಣಾಮಗಳನ್ನು ಅರ್ಪಿಸುತ್ತೇನೆ. #SangolliRayanna
Tweet media one
6
35
386
@iPrajwalRevanna
Prajwal Revanna
4 years
ಮಹದಾಯಿ,ಕೃಷ್ಣ ಮೇಲ್ದಂಡೆ ಮತ್ತು ಮೇಕೆದಾಟು ಯೋಜನೆಗಳ ಪರವಾಗಿ @JanataDal_S ಪಕ್ಷ ಈಗಾಗಲೇ ರಾಷ್ಟ್ರಪತಿಗಳಿಗೆ ಮೆಮೊರೆಂಡಮ್ ಸಲ್ಲಿಸುವುದರ ಮೂಲಕ ರಾಜ್ಯದ ನೀರಾವರಿ ಯೋಜನೆಗಳ ಮೇಲೆ ನಮಗಿರುವ ಬದ್ಧತೆಯನ್ನು ಪ್ರದರ್ಶಿಸಿದೆ. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಪ್ರಧಾನಮಂತ್ರಿ ಅವರನ್ನೂ ಸಹ ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಿದ್ದೇವೆ.
Tweet media one
8
95
535
@iPrajwalRevanna
Prajwal Revanna
3 years
ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಹಾಗೂ ಯುವ ಜನತಾದಳದ ರಾಜ್ಯಾಧ್ಯಕ್ಷರಾದ ಆತ್ಮೀಯ ಸಹೋದರ ಶ್ರೀ ನಿಖಿಲ್ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮೆಲ್ಲಾ ಇಷ್ಟಾರ್ಥಗಳು ಈಡೇರಲಿ, ಭಗವಂತನು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. @Nikhil_Kumar_k
Tweet media one
12
32
532
@iPrajwalRevanna
Prajwal Revanna
5 years
ನಾಡಿನ ಜನತೆಯ ಕ��್ಟಕ್ಕೆ ಸದಾ ಮಿಡಿಯುವ ಚೇತನ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಬರಹಗಾರರೂ ಆದ ಶ್ರೀಮತಿ ಸುಧಾಮೂರ್ತಿ ಅಮ್ಮನವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಸಮಾಜಮುಖಿ ಕಾರ್ಯಗಳು ದೇಶದ ಜನತೆಗೆ ಮಾದರಿಯಾಗಲಿ, ದೇವರು ನಿಮಗೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ. #SudhaMurthy
Tweet media one
2
29
379
@iPrajwalRevanna
Prajwal Revanna
5 years
ಅರುಣಾಚಲ ಪ್ರದೇಶದಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಕಲಗೂಡು ತಾಲ್ಲೂಕಿನ ಅತ್ನಿ ಗ್ರಾಮದ ಯೋಧ ಮಲ್ಲೇಶ್ ರವರು ಕರ್ತವ್ಯದಲ್ಲಿದ್ದ ವೇಳೆ ವೀರ ಮರಣ ಹೊಂದಿದ್ದಾರೆ, ಈ ಸುದ್ದಿ ಮನಸ್ಸಿಗೆ ಬಹಳ ನೋವು ತಂದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ🙏
Tweet media one
23
57
517
@iPrajwalRevanna
Prajwal Revanna
5 years
ಪಕ್ಷದ ಹಿರಿಯ ಮುಖಂಡರು ಹಾಗೂ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ರೀಯುತರು ಕೊರೋನಾ ಸೋಂಕಿನಿಂದ ಶೀಘ್ರ ಗುಣಮುಖರಾಗಿ ಜನಸೇವೆಗೆ ಮರಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.🙏.
6
27
417
@iPrajwalRevanna
Prajwal Revanna
3 years
ರೈತರ ಸಾಲ ಮನ್ನಾ, ಬಡವರ ಬಂಧು ಅಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದು, ಗ್ರಾಮ ವಾಸ್ತವ್ಯ ಹಾಗೂ ಜನತಾ ದರ್ಶನದ ಮೂಲಕ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @hd_kumaraswamy ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ಉತ್ತಮ ಆರೋಗ್ಯ ನೀಡಿ ದೀರ್ಘಕಾಲ ನಾಡಿನ ಸೇವೆ ಮಾಡುವ ಅವಕಾಶ ನೀಡಲೆಂದು ಪ್ರಾರ್ಥಿಸುತ್ತೇನೆ.
Tweet media one
13
29
523
@iPrajwalRevanna
Prajwal Revanna
5 years
ಕಳೆದ ವರ್ಷದಂತೆ ಈ ವರ್ಷವೂ ಕೂಡ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಬೀಳುತ್ತಿದೆ, ಹಾಸನ ಜಿಲ್ಲೆಯಲ್ಲೂ ಕೂಡ ಮಳೆಯಾಗುತ್ತಿದ್ದು, ಜನರ ಸುರಕ್ಷತೆಯ ಜೊತೆಗೆ ಜಾನುವಾರು ಮತ್ತು ಬೆಳೆ ಹಾನಿಯನ್ನು ಕೂಡ ತಡೆಯುವುದು ನಮ್ಮ ಆದ್ಯತೆ, ಈ ನಿಟ್ಟಿನಲ್ಲಿ ಜಿಲ್ಲೆಯ ಅಧಿಕಾರಿಗಳೊಡನೆ ಚರ್ಚಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಿದ್ದೇನೆ.
9
29
355
@iPrajwalRevanna
Prajwal Revanna
4 years
ದೆಹಲಿಯಲ್ಲಿ ನನ್ನ ನೂತನ ಗೃಹ ಕಚೇರಿಯ ಪೂಜಾ ಕಾರ್ಯಕ್ರಮ ಇಂದು ಮಾಜಿ ಪ್ರಧಾನಿಗಳಾದ ಶ್ರೀ @H_D_Devegowda'ರ ಸಮ್ಮುಖದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ @JanataDal_S ಶಾಸಕರುಗಳು ಹಾಗೂ ಮಾಜಿ ಸಚಿವರಾದ @hd_revanna ರವರು ಭಾಗವಹಿಸಿದ್ದರು.
Tweet media one
Tweet media two
Tweet media three
Tweet media four
24
25
498
@iPrajwalRevanna
Prajwal Revanna
5 years
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು @YSV_Datta ನವರೇ. ಕೊರೊನ ಲಾಕ್ಡೌನ್ ಮದ್ಯೆ ನಿಮ್ಮ ಕ್ಷೇತ್ರದ ಕೆಲಸಗಳಿಂದ ನೀವು ಬಿಡುವು ಮಾಡಿಕೊಂಡು ನಿಮ್ಮ ಫೇಸ್ಬುಕ್ ಖಾತೆ ಮೂಲಕ SSLC ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದು ತುಂಬಾ ತುಂಬಾ ಸಂತೋಷದ ವಿಷಯ, ದೇವರು ನಿಮಗೆ ಅರೋಗ್ಯ, ಐಶ್ವರ್ಯ ಕರುಣಿಸಲಿ ಅಂತ ಪ್ರಾರ್ಥಿಸುತ್ತೇನೆ. #HappyBirthdayDattanna
Tweet media one
13
31
482
@iPrajwalRevanna
Prajwal Revanna
5 years
ಸರ್ಕಾರ ಈ ವಿಷಯದಲ್ಲಿ ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ. ಹಿಂದಿಗೆ ನೀಡುತ್ತಿರುವ ವಿಶೇಷ ಪ್ರಾಧಾನ್ಯತೆ ಯನ್ನು ನಮ್ಮ ಕನ್ನಡಕ್ಕೂ ಕೊಡಿ. ಹಲವು ಅಧಿಕೃತ ಭಾಷೆಗಳಿಂದ ಕೂಡಿದ ಈ ಒಕ್ಕೂಟ ವ್ಯವಸ್ಥೆಯಲ್ಲಿ ಕೇವಲ ಒಂದು ಭಾಷೆಯನ್ನು ಆಯ್ಕೆಮಾಡಿ ಭಾಷಾ ದಿವಸವನ್ನಾಗಿ ಆಚರಣೆ ಮಾಡುವುದನ್ನು ಸ್ವಾಭಿಮಾನಿ ಕನ್ನಡಿಗರು ವಿರೋಧಿಸುತ್ತೇವೆ.
1
55
353
@iPrajwalRevanna
Prajwal Revanna
5 years
ನನ್ನ ಕರೆಗೆ ಓಗೊಟ್ಟು ನೀವಿರುವಲ್ಲಿಂದಲೇ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ಸ್ನೇಹಿತರು, ಹಿತೈಷಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ರಕ್ತದಾನ, ಔಷದಿ ಹಾಗೂ ಫುಡ್ ಕಿಟ್ ಗಳನ್ನು ಹಂಚುವ ಮೂಲಕ ಈ ದಿನವನ್ನು ಸಾರ್ಥಕಗೊಳಿಸಿದ್ದೀರಿ, ನಿಮ್ಮೆಲ್ಲರ ಈ ಪ್ರೀತಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು🙏🙏
Tweet media one
12
16
361
@iPrajwalRevanna
Prajwal Revanna
3 years
ಈ ತಾರತಮ್ಯ ಪ್ರಶಸ್ತಿ ನೀಡುವಲ್ಲಿ ಕೂಡ ನಡೆದುಕೊಂಡು ಬಂದಿದೆ, ಉದಾಹರಣೆಗೆ ಕನ್ನಡ ಚಲನಚಿತ್ರ ರಂಗದ ದಿಗ್ಗಜರುಗಳಾದ ಅಂಬರೀಷ್, ವಿಷ್ಣುವರ್ಧನ್, ಅನಂತಾಗ್, ಜಯಂತಿ, ಲೀಲಾವತಿ, ಪುಟ್ಟಣ್ಣ ಕಣಗಾಲ್ ದೊರೆ-ಭಗವಾನ್ ಸೇರಿ ಹಲವು ನಟ ನಿರ್ದೇಶಕರುಗಳಿಗೆ ಸಲ್ಲದ ಪದ್ಮ ಪ್ರಶಸ್ತಿಗಳು ಹಿಂದಿ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಸಾಧನೆಗಳಿಗೆ ದೊರೆತಿವೆ. 3/3.
3
113
497
@iPrajwalRevanna
Prajwal Revanna
4 years
ಕನ್ನಡ ಧ್ವಜ ಕನ್ನಡಿಗರ ಸ್ವಾಭಿಮಾನದ ಸಂಕೇತ, ಈ ಧ್ವಜವನ್ನು ತೆಗೆಯಬೇಕೆಂದು ಪ್ರತಿಭಟನೆ ಮಾಡುವವರು ನಾಡದ್ರೋಹಿಗಳು. ಕರ್ನಾಟಕದಲ್ಲಿ ಕನ್ನಡ ಧ್ವಜ ಹಾರಿಸದೇ ಮುಂಬೈನಲ್ಲಿ ಧ್ವಜ ಹಾರಿಸಲಿಕ್ಕೆ ಆಗುತ್ತಾ?. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿ ತಂಟೆಗೆ ಬಂದರೆ ನಾಡದ್ರೋಹಿ ಎಂಇಎಸ್ ಹಾಗೂ ಶಿವಸೇನೆಯ ಸೊಕ್ಕು ಮುರಿಯಬೇಕಾದೀತು ಎಚ್ಚರ. 1/2
Tweet media one
5
81
486
@iPrajwalRevanna
Prajwal Revanna
4 years
ನನ್ನ ತಂದೆ, ಮಾಜಿ ಸಚಿವರು ಹಾಗೂ ಹೊಳೆನರಸೀಪುರ ಕ್ಷೇತ್ರದ ಶಾಸಕರಾದ ಶ್ರೀ @hd_revanna ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ನಿಮಗೆ ಉತ್ತಮ ಆಯುರಾರೋಗ್ಯ ನೀಡಿ ಇನ್ನೂ ದೀರ್ಘ ಕಾಲ ನಾಡಿನ ಸೇವೆ ಮಾಡಲು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
14
19
482
@iPrajwalRevanna
Prajwal Revanna
5 years
ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳು ಮತ್ತು ಭಾಷೆಗಳು ಸಮಾನ ಎಂದು ನಾವೆಲ್ಲರೂ ಒಪ್ಪಿಕೊಳ್ಳಲಾಗಿದೆ, ಹೀಗಿದ್ದರೂ ಹಿಂದಿಯನ್ನು ಮಾತ್ರ ವಿಶೇಷವಾಗಿ ಪರಿಗಣಿಸಿ ನಮ್ಮ ಮೇಲೆ ಹೇರುವುದು ದಬ್ಬಾಳಿಕೆಯಲ್ಲವೇ. ? 3/4 .#WeWantTwolanguagepolicy.
8
89
335
@iPrajwalRevanna
Prajwal Revanna
5 years
ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಜಗನ್ಮಾತೆ ಸ್ವರ್ಣಗೌರಿ ಕರೋನಾ ಸಾಂಕ್ರಾಮಿಕ ರೋಗದಿಂದ ನಮ್ಮೆಲ್ಲರನ್ನೂ ಪಾರು ಮಾಡಲಿ, ಪರಿಸರ ಸ್ನೇಹಿ ವಿಘ್ನೇಶ್ವರ ಮೂರ್ತಿಯನ್ನು ಪೂಜಿಸುವ ಮೂಲಕ ನಾವೆಲ್ಲರೂ ಪರಿಸರ ಕಾಳಜಿಯನ್ನು ಮೆರೆಯೋಣ. ವೈಯಕ್ತಿಕ ಅಂತರವನ್ನು ಕಾಪಾಡಿ ಕೊಳ್ಳುವುದರ ಮೂಲಕ ಹಬ್ಬವನ್ನು ಆಚರಿಸೋಣ.
7
11
315
@iPrajwalRevanna
Prajwal Revanna
5 years
ಕಳೆದ ವರ್ಷದ ಮಳೆಯಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಕೂಡ ಘೋಷಣೆ ಮಾಡಿದ್ದ ಪರಿಹಾರ ಪೂರ್ಣವಾಗಿ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಈಗ ಈ ವರ್ಷ ಕೂಡ ಮಳೆಯಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರದ ಘೋಷಣೆ ಕೇವಲ ಘೋಷಣೆಗಷ್ಟೇ ಸೀಮಿತವಾಗದೆ ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಪೂರ್ಣ ಪ್ರಮಾಣದ ಪರಿಹಾರ ದೊರೆಯಬೇಕು.
8
30
328
@iPrajwalRevanna
Prajwal Revanna
5 years
ಮಾನ್ಯ ಮುಖ್ಯಮಂತ್ರಿಗಳಾದ @BSYBJP ರವರು ಕೊರೊನ ಸೋಂಕಿನಿಂದ ಶೀಘ್ರ ಗುಣಮುಖರಾಗಿ ಜನಸೇವೆಗೆ ಮರಳಲಿ ಎಂದು ಪ್ರಾರ್ಥಿಸುತ್ತೇನೆ.
1
22
369
@iPrajwalRevanna
Prajwal Revanna
5 years
ಜೂನ್ 3 ರಂದು ಸಚಿವ ಸಂಪುಟದಲ್ಲಿ ಅಂಗೀಕರಿಸಲಾದ ಈ ಕಾಯ್ದೆ ಕೃಷಿ ಕ್ಷೇತ್ರದಲ್ಲಿ ಐತಿಹಾಸಿಕ ನಿರ್ಣಯವೆಂದು ಸರ್ಕಾರ ಬಣ್ಣಿಸಿತು, ಆದರೆ ವಾಸ್ತವವಾಗಿ ಈ ಕಾಯ್ದೆ ರೈತ ವಿರೋಧಿಯಾಗಿದ್ದು ಕೃಷಿ ಕ್ಷೇತ್ರಕ್ಕೆ ಮಾರಕವಾಗಲಿದೆ. 6/6.
3
28
324
@iPrajwalRevanna
Prajwal Revanna
5 years
PMGSY ಯೋಜನೆ ಅಡಿಯಲ್ಲಿ ಆಲೂರು ತಾಲ್ಲೂಕಿನ ಬಿಕ್ಕೋಡು ರಸ್ತೆಯಿಂದ ಚಿಕ್ಕಕಣಗಾಲು ಮುಖಾಂತರ ಸಿ. ಹೊಸಹಳ್ಳಿ ಸೇರುವ 4 ಕೋಟಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ @JDSpresident ರವರು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.
Tweet media one
Tweet media two
Tweet media three
2
18
310
@iPrajwalRevanna
Prajwal Revanna
5 years
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳಿಗೆ ಜನ್ಮ ದಿನದ ಶುಭಾಶಯಗಳು. ಸದಾಕಾಲ ಸಮಾಜ ಸೇವೆಯಲ್ಲಿ ನಿರತರಾಗಿರುವ ನಿಮಗೆ ಆರೋಗ್ಯ ಮತ್ತು ಆಯುಷ್ಯವನ್ನು ಕೊಡಲಿ ಎಂದು ಕಾಲಭೈರವೇಶ್ವರನಲ್ಲಿ ಪ್ರಾರ್ಥನೆ ಮಾಡುತ್ತೇನೆ.
Tweet media one
4
26
364
@iPrajwalRevanna
Prajwal Revanna
3 years
ಹಿಂದಿ ಹೇರಿಕೆ ಹಾಗೂ ಹಿಂದಿ ಭಾಷಾ ದಬ್ಬಾಳಿಕೆ ನಮಗೆ ಹೊಸದೇನು ಅಲ್ಲಾ, ಇದು ಅನೇಕ ದಶಕಗಳಿಂದ ನಡೆದು ಬಂದಿರುವ ಪರಂಪರೆ, ಈ ದಬ್ಬಾಳಿಕೆಗೆ ದಕ್ಷಿಣ ಭಾರತದ ಚಿತ್ರರಂಗ ಕೂಡ ಹೊರತಾಗಿಲ್ಲ, ಸಿನಿಮಾ ರಂಗದಲ್ಲಿ ಹಿಂದಿ ಚಿತ್ರಗಳಿಗೆ ಹಾಗೂ ನಟರಿಗೆ ಸಿಗುವ ಮನ್ನಣೆ ಹಾಗೂ ಪ್ರಶಾಸ್ತ್ಯ ಕನ್ನಡವೂ ಸೇರಿ ಉಳಿದ ಭಾರತೀಯ ಭಾಷೆಗಳಿಗೆ ಎಂದು ದೊರೆತಿಲ್ಲ. 2/3.
1
100
463
@iPrajwalRevanna
Prajwal Revanna
4 years
ರಾಷ್ಟ್ರ ಕಂಡ ಧೀಮಂತ ನಾಯಕ ಹೋರಾಟಗಳಿಂದಲೇ ರೂಪುಗೊಂಡು ಒಕ್ಕೂಟದ ಅತ್ಯುನ್ನತ ಹುದ್ದೆಗೇರಿದ ಏಕೈಕ ಕನ್ನಡಿಗ, ನಾಡು ನುಡಿ ಗಡಿ ಜಲ ವಿಚಾರದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಮಹಾನ್ ಕನ್ನಡಿಗ ಹಾಗೂ ನನ್ನ ಮಾರ್ಗದರ್ಶಕರಾದ ಮಾಜಿ ಪ್ರಧಾನಿ @H_D_Devegowda ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #HBDHDD
Tweet media one
9
37
453
@iPrajwalRevanna
Prajwal Revanna
4 years
Thank you @vijeta_at for acknowledging it. When Shri Ananth Kumar Sir was representing he always stood for our state’s interests. However, today, despite having 25 BJP MPs we’ve no one raising the voice for state. We will always be grateful for his contribution for our state. .
@vijeta_at
Vijeta AnanthKumar
4 years
Why Karnataka politics is really interesting? . JDS is still a very strong political force.
14
70
459
@iPrajwalRevanna
Prajwal Revanna
5 years
ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾನದ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ ಮತದಾರರೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ಶಿರಾ ಕ್ಷೇತ್ರದಲ್ಲಿ ನಿಮ್ಮೊಡನೆ ಕಳೆದ 15 ದಿನಗಳು ಅವಿಸ್ಮರಣೀಯ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ನಮ್ಮ ಪಕ್ಷದ ಅಭ್ಯರ್ಥಿ ಪರ ಶ್ರಮಿಸಿದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರಿಗೂ ನನ್ನ ಧನ್ಯವಾದಗಳು.
8
15
297
@iPrajwalRevanna
Prajwal Revanna
5 years
ಜೆಡಿಎಸ್ ಪಕ್ಷದ ಹಿರಿಯ ಮುಖಂಡರು, ಮಾಜಿ ಸಚಿವರು ಹಾಗೂ ನಮ್ಮೆಲ್ಲರ ಮಾರ್ಗದರ್ಶಿಗಳಾದ @pgr_sindhia ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸುದೀರ್ಘ ಸಾರ್ವಜನಿಕ ಸೇವೆಗಾಗಿ ದೇವರು ಅವರಿಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
2
11
301
@iPrajwalRevanna
Prajwal Revanna
5 years
ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಶ್ರೀ ರಾಮ ವಿಲಾಸ್ ಪಾಸ್ವಾನ್ ಅವರ ನಿಧನದ ಸುದ್ದಿ ಮನಸ್ಸಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಶ್ರೀಯುತರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬ ವರ್ಗದವರಿಗೆ, ಬೆಂಬಲಿಗರಿಗೆ, ಸ್ನೇಹಿತರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
1
22
310
@iPrajwalRevanna
Prajwal Revanna
4 years
ಮಾಜಿ ಮುಖ್ಯ ಮಂತ್ರಿಗಳು ಹಾಗೂ ಜೆಡಿಎಸ್ .ಶಾಸಕಾಂಗ ಪಕ್ಷದ ನಾಯಕರಾದ ಶ್ರೀ @hd_kumaraswamy ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ವಿಷಯ ತಿಳಿದು ತೀವ್ರ ಬೇಸರವಾಗಿದೆ. ಕುಮಾರಣ್ಣನವರು ಕೊರೊನಾ ಸೋಂಕಿನಿಂದ ಶೀಘ್ರ ಗುಣಮುಖರಾಗಿ ಜನಸೇವೆಗೆ ಮರಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.🙏
Tweet media one
6
30
457
@iPrajwalRevanna
Prajwal Revanna
4 years
ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ @doddaganesha ಅವರಿಗೆ ಜನ್ಮದಿನದ ಶುಭಾಶಯಗಳು. ಗಣೇಶ್ ಅವರು ಸದಾ ಕನ್ನಡಪರ ಕಾಳಜಿ ಮೆರೆಯುವುದನ್ನ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಗಮನಿಸಿದ್ದೇನೆ ಇದು ಸದಾ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ. ಭಗವಂತ ನಿಮಗೆ ಉತ್ತಮ ಆರೋಗ್ಯ ಆಯುಷ್ಯನ್ನು ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
4
25
447
@iPrajwalRevanna
Prajwal Revanna
5 years
ಪ್ರಜ್ವಲ್ ರೇವಣ್ಣ ಅವರು ಅಸಮಾಧಾನಿತರಾಗಿ ವೇದಿಕೆಯಿಂದ ನಿರ್ಗಮಿಸಿದರು ಎನ್ನುವ ವರದಿಗಳನ್ನು ಕೆಲವು ಮಾಧ್ಯಮಗಳು ನೆನ್ನೆಯ ದಿನ ಬಿತ್ತರಿಸಿದ್ದು ನನ್ನ ಗಮನಕ್ಕೆ ಬಂದಿದೆ. ಮಾಧ್ಯಮಗಳ ಈ ವರದಿಗಳು ಕೇವಲ ಕಪೋಲಕಲ್ಪಿತ. 1/4.
12
38
285
@iPrajwalRevanna
Prajwal Revanna
5 years
ಮಾಜಿ ಮುಖ್ಯಮಂತ್���ಿ ಶ್ರೀ @siddaramaiah ನವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ, ಸಿದ್ದರಾಮಯ್ಯನವರು ಶೀಘ್ರ ಗುಣಮುಖರಾಗಿ ಜನಸೇವೆಗೆ ಮರಳಲಿ ಎಂದು ಪ್ರಾರ್ಥಿಸುತ್ತೇನೆ🙏.
1
26
335
@iPrajwalRevanna
Prajwal Revanna
5 years
ದಿಟ್ಟ ಹಾಗು ಪ್ರಾಮಾಣಿಕ ಅಧಿಕಾರಿಯಾದ.ಚನ್ನರಾಯಪಟ್ಟಣ ಪೊಲೀಸ್ ಠಾಣೆಯ PSI ಕಿರಣ್ ಕುಮಾರ್ ಅವರು ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ ನೋಡಿ ತುಂಬಾ ಆಘಾತವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತ ಅವರ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತೇನೆ.
12
35
330
@iPrajwalRevanna
Prajwal Revanna
5 years
4 ) ಸರ್ಕಾರ WTO, ಕೆಲ ಮುಂದುವರೆದ ದೇಶ, ಬಹು ರಾಷ್ಟ್ರೀಯ ಕಂಪನಿಗಳು ಹಾಗೂ ದೊಡ್ಡ ಖಾಸಗಿ ಕಂಪನಿಗಳ ಒತ್ತಡಕ್ಕೆ ಮಣಿದು ಈ ರೈತ ವಿರೋದಿ ಕಾಯ್ದೆ ಜಾರಿಗೆ ತರಲು ಹೊರಟಿದೆಯಾ ಎಂಬ ಪ್ರಭಲ ಸಂಶಯ ಕೂಡ ಮೂಡಿದೆ. 5/6.
1
24
299
@iPrajwalRevanna
Prajwal Revanna
5 years
ಬೇಲೂರು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ.➡️ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಯುವುದು. ➡️ ಕಾನೂನು ಸುವ್ಯವಸ್ಥೆಯನ್ನು ಸದೃಢಗೊಳಿಸುವುದು.➡️ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಹಾಳಾಗಿರುವ ರಸ್ತೆಯನ್ನು ಸರಿಪಡಿಸುವುದು. ಹಾಗೂ ತಾಲ್ಲೂಕಿನ ಅಭಿವೃದ್ಧಿ ಕೆಲಸಗಳ ಪ್ರಗತಿ ಬಗ್ಗೆ ಚರ್ಚಿಸಲಾಯಿತು. ಶಾಸಕ ಲಿಂಗೇಶ್ ರವರು ಉಪಸ್ಥಿತರಿದ್ದರು.
3
20
277
@iPrajwalRevanna
Prajwal Revanna
5 years
ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಲಕ್ಷಾಂತರ ಹೋರಾಟಗಾರರಿಗೆ ಗೌರವಪೂರ್ವಕ ಪ್ರಣಾಮಗಳು. #happyindependencedayIndia2020.
5
17
278
@iPrajwalRevanna
Prajwal Revanna
5 years
ಭಾರತ-ಚೀನಾ ಗಡಿಯಲ್ಲಿ ಹುತಾತ್ಮರಾದ ಯೋಧರ ಸಾವು ನನಗೆ ಬಹಳ ನೋವುಂಟು ಮಾಡಿದೆ. ದೇಶಕ್ಕಾಗಿ ಪ್ರಾಣ ನೀಡಿದ ನಿಮಗೆ ಕೋಟಿ ನಮನಗಳು. ಕೂಡಲೇ ಪ್ರಧಾನಮಂತ್ರಿ ಹಾಗೂ ರಕ್ಷಣಾ ಸಚಿವರು ಗಡಿಯಲ್ಲಿ ಉಂಟಾಗಿರುವ ಉದ್ವಿಘ್ನ ಪರಿಸ್ಥಿತಿಯನ್ನು ಶಮನಗೊಳಿಸುವ ಬಗ್ಗೆ ಕ್ರಮಕೈಗೊಳ್ಳಲಿ. ದೇಶದ ಸುಭದ್ರತೆಗೆ ನಾವೆಲ್ಲರೂ ಒಟ್ಟಾಗಿ ನಮ್ಮ ಸೈನಿಕರ ಜೊತೆ ನಿಲ್ಲೋಣ.
18
42
416
@iPrajwalRevanna
Prajwal Revanna
5 years
My Tribute to the Father of the Nation Mahatma Gandhi on his birth anniversary. His ideals and teachings of Non Violent are more relevant in today's India than ever. #gandhijayanthi2020.
2
13
277